ಸುಳ್ಯ ಎಲ್.ಐ.ಸಿ.ಕಚೇರಿಯ ನೂತನ ಶಾಖಾಧಿಕಾರಿಯಾಗಿ ಕೆ.ಗುರುದತ್ ನಾಯಕ್

0

ಸುಳ್ಯ ಭಾರತೀಯ ಜೀವ ವಿಮಾ ನಿಗಮ ಕಚೇರಿಯ ನೂತನ ಶಾಖಾಧಿಕಾರಿಯಾಗಿ ಕೆ.ಗುರುದತ್ ನಾಯಕ್ ರವರು ಜೂ.03 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಭಟ್ಕಳ ಎಲ್.ಐ.ಸಿ.ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದ ಇವರು ವರ್ಗಾವಣೆಗೊಂಡು ಸುಳ್ಯ ಶಾಖೆಗೆ ಬಂದಿರುತ್ತಾರೆ.


ಮಂಗಳೂರಿನ ಅತ್ತಾವರ ನಿವಾಸಿಯಾದ ಇವರ ಪತ್ನಿ ಶ್ರೀಮತಿ ಪ್ರತಿಮಾ ಶೆಣೈಯವರು ಮಂಗಳೂರಿನ ಎಚ್.ಡಿ.ಎಫ್.ಸಿ.ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ಪುತ್ರ ಸಚಿನ್ ನಾಯಕ್ ಝೋರಾ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.