ಗಾಂಧಿನಗರ ಜುಮ್ಮಾ ಮಸೀದಿ ಗೆ ಜಿಲ್ಲಾ ವಕ್ಪ್ ಅಧಿಕಾರಿಗಳ ಭೇಟಿ :ಅನುದಾನ ಬಿಡುಗಡೆಗೆ ಶಿಫಾರಸ್ಸು

0

ದ. ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ರವರು ಸುಳ್ಯ ಗಾಂಧಿನಗರ ಜುಮ್ಮಾ ಮಸ್ಜಿದ್ ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಕ್ಫ್ ಅಧಿಕಾರಿಗಳಾದ ಅಬೂಬಕ್ಕರ್ ಮತ್ತು ಆಸಿಫ್ ರವರನ್ನು ಜಮಾಅತ್ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದಫನ ಭೂಮಿ ಯನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು
ದಫನ ಭೂಮಿ ಅವರಣ ಗೋಡೆ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ವಕ್ಫ್ ಅನುದಾನ ರೂ 10 ಲಕ್ಷ ಮಂಜೂರಾತಿ ಯಾಗಿದ್ದು ಪ್ರಥಮ ಕಂತು ಬಿಡುಗಡೆ ಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಜಮಾಅತ್ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್, ಮಾಜಿ ಅಧ್ಯಕ್ಷ ಕೆ. ಎಂ. ಮುಸ್ತಫ, ಖಜಾಂಚಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ಮಾಜಿ ನಿರ್ದೇಶಕ ಹಾಜಿ ಐ. ಇಸ್ಮಾಯಿಲ್ ಉಪಸ್ಥಿತರಿದ್ದರು