ಮರ್ಕಂಜ : ಕಾಣೆಯಾಗಿದ್ದ ಮಿತ್ತಡ್ಕ ಶೋಭಾಲತಾ ರವರ ಮೃತದೇಹ ಬಾವಿಯಲ್ಲಿ ಪತ್ತೆ

0

ಎರಡು ದಿನದಿಂದ ನಿರಂತರ ಕಾರ್ಯಾಚರಣೆ

ಮರ್ಕಂಜದ ಮಿತ್ತಡ್ಕದ ಮೋಹನರವರ ಪತ್ನಿ ಶೋಭಾಲತಾ ಎಂಬವರು ಕಾಣೆಯಾದ ಹಿನ್ನೆಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಚರಣೆ ನಿನ್ನೆಯಿಂದ ಆರಂಭವಾಗಿದ್ದು, ಇದೀಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಶೋಭಾಲತಾ ರವರು ಸೆ.24ರ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲಾಗಿತ್ತು. ಆರಂಭದಲ್ಲಿ ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಒಳಭಬಾಗದಲ್ಲಿ ಮಣ್ಣು ಜರಿಯತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು‌ ಕೊಕ್ಕೆ ಹಾಕಿ ಹುಡುಕತೊಡಗಿದರು. ಅಲ್ಲದೇ ಕ್ಯಾಮಾರ ಇಳಿಸಿಯೂ ಶೋಧಿಸಲಾಯಿತು. ಆದರೂ ಮೃತದೇಹದ ಕುರುಹು ಕೂಡ ಗೊತ್ತಾಗಿರಲಿಲ್ಲ.

ಆದರೂ ಬಾವಿಯಲ್ಲೇ ಇರುವ ಸಂಶಯ ಧೃಡವಾದ ಹಿನ್ನೆಲೆಯಲ್ಲಿ ಸುಳ್ಯ ಪೋಲೀಸರ ಸಹಕಾರದಿಂದ ಸುಳ್ಯ ತಹಶೀಲ್ದಾರರ ಸೂಚನೆಯಂತೆ
ಬಾವಿಯನ್ನು ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕಾರ್ಯಚರಣೆ ನಿನ್ನೆ ಬೆಳಿಗ್ಗೆಯಿಂದ ಆರಂಭಿಸಲಾಯಿತು. ಇದೀಗ ಮಣ್ಣು ತೆಗೆದ ಬಳಿಕ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಬಾವಿಯೊಳಗೆ ಇಳಿದು ಹುಡಕುವ ಕಾರ್ಯಚರಣೆ ಆರಂಭಿಸಿದಾಗ ಮೃತದೇಹ ಪತ್ತೆಯಾಯಿತು ಎಂದು ತಿಳಿದು ಬಂದಿದೆ. ಇದೀಗ ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸುಳ್ಯಕ್ಕೆ ಕರೆತರುತ್ತಿರುವುದಾಗಿ ತಿಳಿದು ಬಂದಿದೆ.