ಗಾಂಧಿನಗರ ಆಲೆಟ್ಟಿ ಕ್ರಾಸ್ ನಲ್ಲಿ ವಿದ್ಯುತ್ ಲೈನ್ ಮೇಲೆ ಬೀಳುವ ಅಪಾಯಕಾರಿ ಬೃಹತ್ ಗಾತ್ರದ ಮರಗಳ ತೆರವು ಕಾರ್ಯಾಚರಣೆಯನ್ನು ಇಂದು ಬೆಳಗ್ಗೆ ನಿರ್ವಹಿಸಲಾಯಿತು.
![](https://sullia.suddinews.com/wp-content/uploads/2024/07/489bc3b6-8caf-4c21-bd1e-6b347db1b4bc-1024x576.jpg)
ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಲೈನ್ ಗಳನ್ನು ತೆರವು ಕಾರ್ಯ ಮಾಡಿದ ಬಳಿಕ ಅರಣ್ಯ ಇಲಾಖೆಯವರು ಮರವನ್ನು ಕಡಿದು ಕ್ಲೀಯರ್ ಮಾಡಿದರು.
ಈ ಸಂದರ್ಭದಲ್ಲಿ ಸ್ವಲ್ಪ ಸಮಯ ರಸ್ತೆಯಲ್ಲಿ ವಾಹನ ಸಂಚಾರ ಬ್ಲಾಕ್ ಮಾಡಲಾಯಿತು. ಪರ್ಯಾಯವಾಗಿ ಕಲ್ಲುಮುಟ್ಲು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪೋಲಿಸರು ಅನುವು ಮಾಡಿಕೊಟ್ಟರು. ಮರವನ್ನು ತೆರವು ಮಾಡಿದ ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಸುಳ್ಯ ಪೋಲಿಸರು ಆಗಮಿಸಿ ವಾಹನ ಸಂಚಾರದ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸ್ಥಳೀಯ ನಗರ ಪಂಚಾಯತ್ ಸದಸ್ಯರು ಸಹಕರಿಸಿದರು.
![](https://sullia.suddinews.com/wp-content/uploads/2024/07/ec7b0750-cf9c-470f-a494-ab089eae6db7-1024x576.jpg)