ಬೂಡು ಕೇರ್ಪಳ ಭಗವತಿ ಯುವ ಸೇವಾ ಸಂಘದಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ

0

ಶ್ರೀ ಭಗವತಿ ಯುವ ಸೇವಾ ಸಂಘ ಬೂಡು ಕೇರ್ಪಳ – ಕುರುಂಜಿಗುಡ್ಡೆ ಇದರ ಆಶ್ರಯದಲ್ಲಿ ಶ್ರದ್ಧಾಕೇಂದ್ರ ಸ್ವಚ್ಛತೆ ಕಾರ್ಯಕ್ರಮವು ಜು.07 ರಂದು ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯಿತು.


ಭಗವತಿ ಯುವ ಸೇವಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಕೇರ್ಪಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಾರ್ಧನ ನಾಯ್ಕ್ ಖಜಾಂಜಿಗಳು ಕೆ ವಿ ಜಿ ಸುಳ್ಯ ಹಬ್ಬ ಸಮಿತಿ ಸುಳ್ಯ ಇವರು ನೆರವೇರಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆನಂದ ಗೌಡ ಖಂಡಿಗ ನಿಕಟಪೂರ್ವ ಅಧ್ಯಕ್ಷರು ರೋಟರಿ ಕ್ಲಬ್ ಸುಳ್ಯ, ಬೂಡು ರಾಧಾಕೃಷ್ಣ ರೈ ಗೌರವ ಅಧ್ಯಕ್ಷರು ಶ್ರೀ ಭಗವತಿ ಯುವ ಸೇವಾ ಸಂಘ, ಎನ್. ಎ. ರಾಮಚಂದ್ರ ನಿರ್ದೇಶಕರು ಸಿ. ಎ. ಬ್ಯಾಂಕ್. ಸುಳ್ಯ, ಜಗದೀಶ್ ಸರಳೀಕುಂಜ್ಜ ಉದ್ಯಮಿಗಳು ಸುಳ್ಯ, ಶಿವರಾಮ ಕೇರ್ಪಳ ಕೆವಿಜಿಪಿ ಗೌರವ ಸಲಹೆಗಾರರು ಭಗವತಿ ಯುವ ಸೇವಾ ಸಂಘ, ರಾಜೇಶ್ ಕುರುಂಜಿ ಗುಡ್ಡೆ ಕಾರ್ಯದರ್ಶಿ ಭಗವತಿ ಯುವ ಸೇವಾ ಸಂಘ, ಮಹಾಬಲ ರೈ ಖಜಾಂಜಿ ಭಗವತಿ ಯುವ ಸೇವಾ ಸಂಘ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ನಗರದ ಸಂಚಾಲಕ ವರ್ಶಿತ್ ಚೊಕ್ಕಾಡಿ, ಪ್ರದೀಪ್ ರೈ ಬೂಡು, ಸಂಘಟ ಕಾರ್ಯದರ್ಶಿ ಭಗವತಿ ಯುವ ಸೇವಾ ಸಂಘ, ಸೀತಾರಾಮ,ಕ್ರೀಡಾ ಕಾರ್ಯದರ್ಶಿ ಭಾಗವತಿ ಯುವ ಸೇವಾ ಸಂಘ, ಕಿಶೋರ್ ಕುಮಾರ್ ಶೆಟ್ಟಿ ಬೂಡು ,ಸಾಂಸ್ಕೃತಿಕ ಕಾರ್ಯದರ್ಶಿ ಭಗವತಿ ಯುವ ಸೇವಾ ಸಂಘ, ಲತಾ ರೈ ಬೂಡು, ಸಾಯೋಜಕಿ ಮಾತೃವಾಹಿನಿ ಸುಳ್ಯ ನಗರ , ಪ್ರೀತಿಕಾ ಚೆಮ್ನೂರು ಸಂಯೋಜಕಿ ದುರ್ಗಾ ವಾಹಿನಿ ಸುಳ್ಯ ನಗರ, ಹಾಗೂ ಭಗವತಿ ಯುವ ಸೇವಾ ಸಂಘದ ಸದಸ್ಯರಾದ ವಾಸುದೇವ ನಾಯಕ್,ವಿಜಯ ಕುಮಾರ್ ಕುರುಂಜಿ ಗುಡ್ಡೆ, ನಿತ್ಯಾನಂದ, ವಿಠಲ ರೈ ಬೂಡು, ಮೋನಪ್ಪ ಪೂಜಾರಿ, ತಿಕ್ಷನ್ ಗೌಡ, ಶಿವಪ್ರಸಾದ್ ರೈ, ಜನಾರ್ಧನ ಕುರುಂಜಿ ಗುಡ್ಡೆ, ಕುಸುಮಧರ ರೈ ಬೂಡು, ಉಪೇಂದ್ರ ನಾಯಕ್, ಅಭಿಜಿತ್, ಕಿರಣ್, ಲಕ್ಷ್ಮೀಶ್ ಆರ್ಟಿಸ್ಟ್ ಕೇರ್ಪಳ, ಸುಧಾಕರ್ ಕುರುಂಜಿ ಭಾಗ್, ಅಭಿ ಕುರುಂಜಿ ಗುಡ್ಡೆ, ಹರ್ಶಿತ್ ಕುರುಂಜಿ ಗುಡ್ಡೆ, ಕೃಷ್ಣ ಕುರುಂಜಿ ಗುಡ್ಡೆ,ಉಪಸ್ಥಿತರಿದ್ದರು.
ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ ಜಯಂತ ಕೇರ್ಪಳ ವಂದಿಸಿದರು.