ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ನೂತನ ಪದಾಧಿಕಾರಿಗಳ ಆಯ್ಕೆ

0

ಕೃಷ್ಣನ್ ನಾಯರ್ ಕುತ್ತಮೊಟ್ಟೆ – ಅಧ್ಯಕ್ಷ, ಶಶಿಧರ ನಾಯರ್ ಉಬರಡ್ಕ – ಕಾರ್ಯದರ್ಶಿ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ನ ಮುಂದಿನ ಎರಡು ವರ್ಷಗಳ ಸಾಲಿಗೆ ನೂತನ ಅಧ್ಯಕ್ಷರಾಗಿ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಹಾಗೂ ಕಾರ್ಯದರ್ಶಿಯಾಗಿ ಶಶಿಧರ ನಾಯರ್ ಉಬರಡ್ಕ ಆಯ್ಕೆಯಾಗಿದ್ದಾರೆ.

ಜು. 14 ರಂದು ಕುರುಂಜಿ ಭಾಗ್ ಸ್ವಾಗತ್ ಬಿಲ್ಡಿಂಗ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಉಪಾಧ್ಯಕ್ಷರಾಗಿ ದುರ್ಗಾಕುಮಾರ್ ನಾಯರ್‌ಕೆರೆ, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥನ್ ನಾಯರ್ ಮಧುವನ, ಕೋಶಾಧಿಕಾರಿಯಾಗಿ ಪ್ರಭಾಕರ ನಾಯರ್ ಸ್ವಾಗತ್, ಸಹ ಕೋಶಾಧಿಕಾರಿಯಾಗಿ ಸಿ.ಎಚ್. ಪ್ರಭಾಕರ ನಾಯರ್ ಆಯ್ಕೆಗೊಂಡರು.

ಕೇಂದ್ರ ಸಮಿತಿ ಸದಸ್ಯರಾಗಿ ಭಾಸ್ಕರನ್ ನಾಯರ್ ಮಧುವನ, ಬಾಲಕೃಷ್ಣ ನಾಯರ್ ಎಸ್.ಬಿ. ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದ್ಮನಾಭನ್ ನಾಯರ್ ಮಧುವನ, ಚಂದ್ರಶೇಖರ ನಾಯರ್ ಉಬರಡ್ಕ, ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ, ಅಭಿನಂದನ್ ನಾಯರ್, ಮಧುಸೂದನ ನಾಯರ್ ಉಬರಡ್ಕ, ಹರಿದಾಸ್ ಪಾಲಡ್ಕ, ಮಧುಕರ ಮಧುವನ, ಶಿಜು ನಾಯರ್ ಮರ್ಕಂಜ, ಶ್ರೀಮತಿ ದಾಕ್ಷಾಯಿಣಿ ಭಾಸ್ಕರನ್ ನಾಯರ್ ಮಧುವನ , ಶ್ರೀಮತಿ ಶಕುಂತಲಾ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಆಯ್ಕೆಗೊಂಡರು.