ಹರಿಹರ ಪಲ್ಲತ್ತಡ್ಕ : ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0


ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹರಿಹರ, ಬಾಳುಗೋಡು ಐನೆಕಿದು ಇವುಗಳ ಸಹಭಾಗಿತ್ವದಲ್ಲಿ ೯ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಶ್ರೀ ಹರಿಹರೇಶ್ವರ ದೇವರಿಗೆ ವಿಶೇಷವಾದ ಸೇವೆಯನ್ನು ಸಲ್ಲಿಸುವುದರ ಮುಖಾಂತರ ದೇವಸ್ಥಾನದ ಅರ್ಚಕ ಕೃಷ್ಣಪ್ರಸಾದರವರು ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.


ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಮತಿ ತಾರಾ ಮಲ್ಲಾರ, ಅಧ್ಯಕ್ಷರಾದ ಶ್ರೀಮತಿ ಹರ್ಷಿಣಿ ಶಿಶಿರ್ ಕಟ್ಟೆಮನೆ, ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಕಳಿಗೆ, ಕೋಶಾಧಿಕಾರಿ ಗೀತಾ ವಿಶ್ವನಾಥ್ ಬಿಳಿಮಲೆ, ನಿಕಟಪೂರ್ವ ಅಧ್ಯಕ್ಷರಾದ ಗೀತಾ ರಘುರಾಮ ಕೂಜುಗೋಡು ಕಲ್ಲೇಮಠ, ಸದಸ್ಯರುಗಳಾದ ಉಷಾ ಪ್ರಭಾಕರ ಕಿರಿಭಾಗ, ರೇಷ್ಮಾ ಪ್ರಕಾಶ್ ಕಟ್ಟೆಮನೆ, ಮನೋರಮ ಮುಚ್ಚಾರ, ಲಲಿತಾ ಮಾಣೆಬೆಟ್ಟು, ಹೇಮಮಾಲಿನಿ ಗಿರೀಶ್ ಉರಿಮಜಲು, ವಿಜಯ ಜಯರಾಮ್ ಕೂಜುಗೋಡು ಕಲ್ಲೇಮಠ, ಅಂಬಿಕಾ ಗುಂಡಿಹಿತ್ಲು ಮತ್ತಿತರು ಉಪಸ್ಥಿತರಿದ್ದರು.