ತಳೂರಿನಲ್ಲಿ ರಸ್ತೆಗೆ ಬಿದ್ದ ಮರ – ವಾಹನ ಸಂಚಾರಕ್ಕೆ ತಡೆ – ತೆರವು ಕಾರ್ಯ ಆರಂಭ

0

ಸೋಣಂಗೇರಿ – ಗುತ್ತಿಗಾರು ರಸ್ತೆಯ ತಳೂರು ಎಂಬಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ತಡೆಯಾದ ಘಟನೆ ಇದೀಗ ವರದಿಯಾಗಿದೆ‌.

ತಳೂರು ಶ್ರೀ ರಾಜ್ಯ ಯಾನೆ ಪುರುಷ ದೈವ ದೈವಸ್ಥಾನದ ಬಳಿ ಮುಖ್ಯ ರಸ್ತೆಗೆ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮರವೊಂದು ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಪರಿಣಾಮ ವಾಹನ ಸಂಚಾರಕ್ಕೆ ತಡೆಯಾಗಿದೆ. ಇದೀಗ ತೆರವು ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.