ಜಾಲ್ಸೂರು: ಗಡಿಯಲ್ಲಿ ಬರೆಕುಸಿದು ದನದ ಕೊಟ್ಟಿಗೆಗೆ ಹಾನಿ

0

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬರೆಕುಸಿತಗೊಂಡು ದನದ ಕೊಟ್ಟಿಗೆಗೆ ಹಾನಿಯಾದ ಘಟನೆ ಜಾಲ್ಸೂರಿನ ಗಡಿಯಲ್ಲಿ ಜು.19ರಂದು ಸಂಭವಿಸಿದೆ.

ಸುದ್ದಿ ಪತ್ರಿಕೆ ವಿತರಕರಾದ ಜಾಲ್ಸೂರಿನ ಬೆನಕ ಎಂ.ಎಸ್. ಭಟ್ ಅವರ ಮನೆಯ ದನದ ಕೊಟ್ಟಿಗೆಯ ಬದಿಯಲ್ಲಿ ಬರೆಕುಸಿತವಾಗಿದ್ದು, ದನದ ಕೊಟ್ಟಿಗೆಯ ಶೀಟ್ ಗಳು ಹಾಗೂ ಗೋಡೆಗೆ ಹಾನಿಯಾಗಿದ್ದು, ಅಂದಾಜು ಮೂವತ್ತೈದು ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.