ಸುದ್ದಿ ನ್ಯೂಸ್ ಫಲಶೃತಿ : ಅಯ್ಯನಕಟ್ಟೆ ಬಸ್ ನಿಲ್ದಾಣದ ಬಳಿಯಿದ್ದ ಅಪಾಯಕಾರಿ ಮರದ ತೆರವು, ಇಲಾಖೆಯ ಕಾರ್ಯಕ್ಕೆ ಶ್ಲಾಘನೆ

0

ಅಯ್ಯನಕಟ್ಟೆಯಿಂದ ಚೊಕ್ಕಾಡಿ – ಬೆಂಗಮಲೆಗೆ ಕಡೆಗೆ ತಿರುಗುವ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮರ ಅಪಾಯದ ಸ್ಥತಿಯಲ್ಲಿರುವ ಬಗ್ಗೆ ಜು. 18ರಂದು ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಬಿತ್ತರಗೊಂಡಿತ್ತು.

ವರದಿಯನ್ನು ಗಮನಿಸಿದ ಬೆಳ್ಳಾರೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜು. 19ರಂದು ಜಂಟಿಯಾಗಿ ಮರ ತೆರವು ಕಾರ್ಯಾಚರಣೆ ಮಾಡಿರುವ ಘಟನೆ ನಡೆದಿದೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತರಾದ ಇಲಾಖೆಯ ಕಾರ್ಯ ವೈಖರಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.