ಬರೆಜರಿದು ಹಾನಿ ಸಂಭವಿಸಿದ ಕೊಯನಾಡು ಶಾಲೆಗೆ ನಾಳೆ ಶಾಸಕ ಪೊನ್ನಣ್ಣ ಭೇಟಿ

0

ಕರ್ತೋಜಿಯಲ್ಲಿ ಹೆದ್ದಾರಿ ವೀಕ್ಷಿಸಲಿರುವ ಶಾಸಕರು

ಭಾರೀ ಪ್ರಮಾಣದಲ್ಲಿ ಬರೆಜರಿದು ಭೂಕುಸಿತ ಸಂಭವಿಸಿ, ವ್ಯಾಪಕ ಹಾನಿ ಸಂಭವಿಸಿದ ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸ.ಹಿ.ಪ್ರಾ.ಶಾಲೆ ಹಾಗೂ ರಸ್ತೆ ಬಿರುಕು ಕಾಣಿಸಿರುವ ಕರ್ತೋಜಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ನಾಳೆ ಅಪರಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಲಿರುವುದಾಗಿ ತಿಳಿದುಬಂದಿದೆ.

ಜು.20ರಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಲಿರುವ ಶಾಸಕರು ಅಪರಾಹ್ನ 3.30ಕ್ಕೆ ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕರ್ತೋಜಿಯಲ್ಲಿ ರಸ್ತೆ ಬಿರುಕು ಬಿಟ್ಟ ಸ್ಥಳ – ಭೂಕುಸಿತದ ಭೀತಿಯಿರುವ ಸ್ಥಳ ಹಾಗೂ ಕೊಯನಾಡು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿದುಬಂದಿದೆ