ಜು.28: ಸಂಪಾಜೆ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಆಟಿ ಸಂಭ್ರಮ

0

ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭ

ದ.ಕ. ಸಂಪಾಜೆ ಗ್ರಾಮದ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವತಿಯಿಂದ ಆಟಿ ಸಂಭ್ರಮ, ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭವು ಕಾಪಿಲಗದ್ದೆ ಇರ್ಣೆ – ಗುತ್ತು ಕುಳವಾರು ಭೂಮಿ ಬೈಲೆ ಗೂನಡ್ಕದಲ್ಲಿ ಜು.28ರಂದು ಜರುಗಲಿದೆ.

ಆಟಿ ಸಂಭ್ರಮ ಕಾರ್ಯಕ್ರಮದಲ್ಲಿ ಹಿರಿಯ ದೈವನರ್ತಕ ಕೇಪು ಅಜಲ ಅವರನ್ನು ಸನ್ಮಾನಿಸಲಾಗುವುದು.
ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ, 60 ವರ್ಷ ಮೇಲ್ಪಟ್ಟ ವಯಸ್ಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ಜರುಗಲಿದ್ದು, ಓಟ, ಹಗ್ಗಜಗ್ಗಾಟ, ವಿಷವರ್ತುಲ, ಹಿಡಿಯುವ ಆಟ, ಚಮಚ ನಿಂಬೆಹಣ್ಣಿನ ಓಟ, ವಜ್ರಮುಷ್ಠಿ ಕಾಳಗ, ಗೂಳಿಕಾಳಗ, ಮೂಟೆ ಹೊರುವುದು, ಚೆಂಡಾಟ, ಗುರು ಶಿಷ್ಯರು, ಕೆರೆದಡ ಸೇರಿದಂತೆ ಮುಂತಾದ ಮನೋರಂಜನಾ ಆಟಗಳು ನಡೆಯಲಿದ್ದು, ಎಲ್ಲಾ ಕ್ರೀಡಾಸ್ಪರ್ಧೆಗಳು ಗ್ರಾಮಮಟ್ಟದಾಗಿದ್ದು, ದ‌.ಕ. ಸಂಪಾಜೆ ಗ್ರಾಮದವರಿಗೆ ಮಾತ್ರ ಸೀಮಿತವಾಗಿರುತ್ತದೆ.