ಸಾಹಿತಿ ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ರಿಗೆ ಬೆಂಗಳೂರಿನಲ್ಲಿ ಸನ್ಮಾನ

0

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಬೆಳಕು ಸಾಹಿತ್ಯ ಸಂಭ್ರಮ -2024 ಸಮ್ಮೇಳನದಲ್ಲಿ ಸುಳ್ಯದ ಖ್ಯಾತ ಸಾಹಿತಿ, ಜ್ಯೋತಿಷಿ, ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ಬೆಳಕು ಸಂಸ್ಥೆಯ ಸ್ಥಾಪಕಾಧ್ಯಕ್ಷ ಅಣ್ಣಪ್ಪ ಮೇಟಿಗೌಡ ಅವರು ಸಮ್ಮಾನಿಸಿ ಗೌರವಿಸಿದರು.

ಭೀಮರಾವ್ ವಾಷ್ಠರ್ ಅವರ ಅಪಾರ ಸಾಧನೆ ಪರಿಗಣಿಸಿ ಸನ್ಮಾನಿಸಿದ ಸಮಾರಂಭದ ವೇದಿಕೆಯಲ್ಲಿ ಖ್ಯಾತ ಕವಿಗಳಾದ ಜಯಕವಿ ಜಯಪ್ಪ ಹೊನ್ನಾಳಿ, ವಿಹಾರಿ ಹರಿನರಸಿಂಹ ಉಪಾಧ್ಯಾಯ, ಲತಾ ಹೆಗಡೆ, ಉದ್ಘಾಟಕರಾದ ಸಿದ್ರಾಮಪ್ಪ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.