ಸಮಾಜರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಬೆಂಗಳೂರಿನ ಜ್ಞಾನ ಮಂದಾರ ಟ್ರಸ್ಟ್ (ರಿ) ಕನ್ನಡ ಕಲಾ ಪ್ರತಿಭೋತ್ಸವ 2024 -25 ನೇ ಸಾಲಿನ ಸಮಾಜರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಶಿಕ್ಷಣ,ವೈದ್ಯಕೀಯ,ತಂತ್ರಜ್ಞಾನ, ಕ್ರೀಡೆ,ಪತ್ರಿಕಾ ಮಾಧ್ಯಮ, ಭರತನಾಟ್ಯ, ಸಂಗೀತ, ಯಕ್ಷಗಾನ, ಮಕ್ಕಳ ಕಲ್ಯಾಣ, ಸಮಾಜ ಸೇವೆ, ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಗಣ್ಯರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಇತ್ತೀಚಿನ ಭಾವಚಿತ್ರ ಸಾಧನೆಯ ವಿವರಗಳೊಂದಿಗೆ ಆಗಸ್ಟ್ 30ರೊಳಗೆ ನಿರ್ದೇಶಕರು, ಜ್ಞಾನ ಮಂದಾರ ಟ್ರಸ್ಟ್ ನಂ 39 ಗಾಣಿಗರಹಳ್ಳಿ, ಚಿಕ್ಕಬಾಣವಾರ ಅಂಚೆ ಬೆಂಗಳೂರು 90 ಇಲ್ಲಿಗೆ ಕಳಿಸಿ ಕೊಡಲು ಪತ್ರಿಕಾ ಮಾಧ್ಯಮ ಪ್ರಕಟಣೆಯಲ್ಲಿ ಕೋರಲಾಗಿದೆ.