ಮುಳ್ಯ – ಅಟ್ಟೂರು : ವರಮಹಾಲಕ್ಷ್ಮಿ ಪೂಜಾ ಆಮಂತ್ರಣ ಬಿಡುಗಡೆ

0

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಇಲ್ಲಿಯ ಶ್ರೀಗೌರಿ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಮೊದಲನೇ ವರ್ಷದ ವರಮಹಾಲಕ್ಷ್ಮೀ ಪೂಜಾ ಕಾರ್ಯದ ಆಮಂತ್ರಣ ಬಿಡುಗಡೆಯು ಜು.21ರಂದು ಶ್ರೀ ಮಹಾಗಣಪತಿ ಭಜನಾ ಮಂದಿರ ವಠಾರ ದಲ್ಲಿ ನಡೆಯಿತು.


ಭಜನಾ ಮಂದಿರದ ಗೌರವ ಅಧ್ಯಕ್ಷ ಅಚ್ಚುತ ಅಟ್ಟೂರ್, ಮಂದಿರದ ಅಧ್ಯಕ್ಷ ಹರಿಪ್ರಕಾಶ್ ಮುಳ್ಯರವರ ಉಪಸ್ಥಿತಿ ಯಲ್ಲಿ ನಡೆಯಿತು. ಪೂಜಾ ಗೌರವ ಸಲಹೆ ಗಾರ ನಾಗರಾಜ್ ಮುಳ್ಯ, ದೇವಿಪ್ರಸಾದ್ ಅತ್ಯಾಡಿ, ರಮಾನಾಥ್ ಮುಳ್ಯ ಕಾನ, ಮತ್ತು ಹರೀಶ್ ಮುಳ್ಯ, ಹರೀಶ್ ಅಟ್ಲೂರ್, ದಯಾನಂದ್ ಮುಳ್ಯ, ಹೇಮನಾಥ ಕುಂಚಡ್ಕ,ನಾರಾಯಣ ಮುಳ್ಯ, ಶೋಭಾ ಹರಿಪ್ರಸಾದ್ ಮತ್ತು ಶ್ರೀ ಗೌರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯಾ ಪದಾಧಿಕಾರಿಗಳು, ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.