ಸುಳ್ಯ ತಾಲೂಕಿನಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಗೆ ಪೂರಕ ಅವಶ್ಯಕತೆ ಒದಗಿಸುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ

0

ಸುಳ್ಯ ತಾಲೂಕಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ಬಿಎಸ್ ಎನ್ ಎಲ್ ಟವರುಗಳ ನಿರ್ವಹಣೆ, ಬ್ಯಾಟರಿ ಇತರ ಅವಶ್ಯಕತೆಗಳನ್ನು ಒದಗಿಸುವಂತೆ ದೆಹಲಿಯಲ್ಲಿ ಬಿ ಎಸ್ ಎನ್ ಎಲ್ ಅಧ್ಯಕ್ಷ ಮತ್ತು ಎಂ.ಡಿ ರಾಬರ್ಟ್ ಜೆ ರವಿ ಅವರಿಗೆ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಜು. 23 ರಂದು ದೆಹಲಿಯಲ್ಲಿ ಮನವಿ ಸಲ್ಲಿಸಿದರು.

ಬಿಎಸ್ ಎನ್ ಎಲ್ ಟವರು ಗಳ ನಿರ್ವಹಣೆ, ಬ್ಯಾಟರಿ ಮತ್ತು ಇತರ ಅವಶ್ಯಕತೆಗಳನ್ನು ಒದಗಿಸುವುದರ ಬಗ್ಗೆ ಚರ್ಚಿಸಿ, ಆ ಪ್ರದೇಶದಲ್ಲಿ ಹೆಚ್ಚುವರಿ ಟವರ್ ಅನ್ನು ಸ್ಥಾಪಿಸುವಂತೆ ದ.ಕ.ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟ ಮನವಿ ಸಲ್ಲಿಸಿದರು.