ಮಲಗಿದಲ್ಲಿರುವ ತಂದೆಯನ್ನು ಮನೆಯೊಳಗೇ ಬಿಟ್ಟು ಹೋದ ಮಕ್ಕಳು..

0

ಜಾಲ್ಸೂರಿನಲ್ಲೊಂದು ಘಟನೆ : ವೃದ್ಧನ ಸಮಸ್ಯೆಗೆ ಸ್ಪಂದಿಸುವುದೇ ಆಡಳಿತ

ಮಲಗಿದಲ್ಲಿರುವ ತಂದೆಯನ್ನು ಇಬ್ಬರು ಮಕ್ಕಳು ಮನೆಯಲ್ಲೇ ಬಿಟ್ಟು ಹೋಗಿರುವ ಘಟನೆ ಜಾಲ್ಸೂರು ಗ್ರಾಮದಿಂದ ವರದಿಯಾಗಿದೆ.

ಜಾಲ್ಸೂರು ಗ್ರಾಮದ ಅಡ್ಕಾರು – ಕೋನಡ್ಕಪದವು ನಿವಾಸಿ ಹುಕ್ರಪ್ಪ ನಾಯ್ಕರಿಗೆ ಕೆಲವು ತಿಂಗಳ ಹಿಂದೆ ಅಸೌಖ್ಯ ಕಾಣಿಸಿಕೊಂಡಿತ್ತು. (ಹುಕ್ರಪ್ಪ ನಾಯ್ಕರ ಪತ್ನಿ ಕೆಲ ವರ್ಷಗಳ ಹಿಂದ ತೀರಿ ಹೋಗಿದ್ದಾರೆ.) ಹುಕ್ರಪ್ಪ ನಾಯ್ಕರಿಗೆ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ. ತಂದೆಗೆ ಅಸೌಖ್ಯ ಕಾಣಿಸಿಕೊಂಡು ಮಲಗಿದಲ್ಲೇ ಆದ ಮೇಲೆ ಅವರ ಹೆಣ್ಣು ಮಕ್ಕಳು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಒಬ್ಬರಂತೆ ಒಬ್ಬರು ನೋಡಿಕೊಳ್ಳುತ್ತಿದ್ದರು.‌ ಆದರೆ ಇದೀಗ ಕಳೆದ 5 ದಿನಗಳ ಹಿಂದೆ ಮಕ್ಕಳಿಬ್ಬರೂ ತಂದೆಯನ್ನು ಬಿಟ್ಟು ತಮ್ಮ ಗಂಡನ ಮನೆಗೆ ಹೋಗಿದ್ದಾರೆ. ಮೇಲೆ ಏಳಲಾಗದ ಹುಕ್ರಪ್ಪ ನಾಯ್ಕರು‌ ಮಲಗಿಕೊಂಡಿದ್ದಾರೆ. ಅಕ್ಕ ಪಕ್ಕದ ಮನೆಯವರು ಊಟ ಕೊಡುತ್ತಾರಾದರೂ ಶೌಚ, ಮೂಲ ಎಲ್ಲವೂ ಅಲ್ಲೇ ಇದೆ. ಸ್ವಚ್ಚ ಮಾಡದೇ ದುರ್ವಾಸನೆ ಬೀರುತ್ತಿದೆ.

ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿ, ಮಾಜಿ ಅಧ್ಯಕ್ಷರು, ವಾರ್ಡ್ ಸದಸ್ಯರಿಗೆ ವಿಷಯ ತಿಳಿಸಲಾಗಿದ್ದರೂ, ಹುಕ್ರಪ್ಪ ನಾಯ್ಕರ ಮಕ್ಕಳನ್ನು ಕರೆಸುವ ವ್ಯವಸ್ಥೆ ಇನ್ನೂ ಆಗಿಲ್ಲ. ಈ ಸಮಸ್ಯೆಯನ್ನು ಮನಗಂಡು ಗ್ರಾ.ಪಂ. ಹಾಗು ತಾಲೂಕು ಆಡಳಿತ ಹುಕ್ರಪ್ಪ ನಾಯ್ಕರ ಮಕ್ಕಳು ಕರೆಸಿ ತಂದೆಯನ್ನು‌ ನೋಡಿಕೊಳ್ಳುವಂತೆ ಮಾಡಬೇಕು – ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಸ್ಥಳೀಯ ನಿವಾಸಿಗಳು.