ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಉಪಾಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಪುನರಾಯ್ಕೆ

0


ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿ ಹಾಗೂ ಉಪಾಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಪುನರಾಯ್ಕೆಗೊಂಡಿದ್ದಾರೆ. ಜು. ೨೬ರಂದು ಸೊಸೈಟಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.


ಚುನಾವಣಾಧಿಕಾರಿ ಸಹಕಾರಿ ಸಂಘಗಳ ಅಧಿಕಾರಿ ಶಿವಲಿಂಗಯ್ಯರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರುಗಳಾದ ಪಿ.ಸಿ.ಜಯರಾಮ್, ಎಸ್.ಸಂಶುದ್ದೀನ್, ಸೋಮಶೇಖರ ಕೊಯಿಂಗಾಜೆ, ಸುರೇಶ್ ಎಂ.ಎಚ್., ವಿನೂಪ್ ಮಲ್ಲಾರ, ಲಿಜೋ ಜೋಸ್ ಗುತ್ತಿಗಾರು, ಭುವನೇಂದ್ರ ದಾಸ್ ಉಬರಡ್ಕ, ಚಂಚಲಾಕ್ಷಿ ಮುಳುಗಾಡು, ಪುಷ್ಪಾ ಪೂಂಬಾಡಿ ಉಪಸ್ಥಿತರಿದ್ದರು. ಟಿಎಪಿಸಿಎಂಎಸ್ ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ವಂದಿಸಿದರು.