ಅರಂತೋಡು: ಲಾರಿ ಹಿಂದಕ್ಕೆ ತೆಗೆಯುವ ವೇಳೆ ತಡೆಗೋಡೆಗೆ ಢಿಕ್ಕಿ

0

ಪಾನ್ ಸ್ಟಾಲ್ ಅಂಗಡಿಗೆ ಹಾನಿ

ಅರಂತೋಡಿನ ತೆಕ್ಕಿಲ್ ಕಾಂಪ್ಲೆಕ್ಸ್ ಮುಂಭಾಗದ ಹೋಟೆಲ್ ಪಕ್ಕದಲ್ಲಿ ಲಾರಿ ಚಾಲಕ ಲಾರಿ ಹಿಂದಕ್ಕೆ ತೆಗೆಯುವಾಗ ನಿಯಂತ್ರಣ ತಪ್ಪಿ ತಡೆಗೋಡೆಗೆ ಗುದ್ದಿ ಪಕ್ಕದಲ್ಲಿದ್ದ ಪಾನ್ ಸ್ಟಾಲ್ ಗೆ ಹಾನಿಯಾದ ಘಟನೆ ಜು.27ರಂದು ಬೆಳಿಗ್ಗೆ ಸಂಭವಿಸಿದೆ.

ಲಾರಿ ಚಾಲಕ ರಾತ್ರಿ ಸುಳ್ಯದಲ್ಲಿ ತನ್ನ ಮೊಬೈಲನ್ನು ಅಂಗಡಿಯೊಂದರಲ್ಲಿ ಬಿಟ್ಟು ಬಂದಿದ್ದು, ಅರಂತೋಡು ತಲುಪಿದಾಗ ಮೊಬೈಲ್ ನೆನಪಾಗಿ ಗಲಿಬಿಲಿಯಿಂದ ಲಾರಿಯನ್ನು ತೆಕ್ಕಿಲ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ಹಿಂದಕ್ಕೆ ತೆಗೆಯುವ ವೇಳೆ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದು, ಪಕ್ಕದ ಪಾನ್ ಸ್ಟಾಲ್ ಗೆ ಢಿಕ್ಕಿಯಾಗಿ ಸಮೀಪದ ಹೋಟೆಲ್ ನಾಮಫಲಕ, ಗ್ರಾಮ ಪಂಚಾಯತ್ ಕಸದ ತೊಟ್ಟಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ.