ಸಂಪಾಜೆ: ಬೈಲೆ -ಗೂನಡ್ಕ ಶ್ರೀ ಶಿರಾಡಿ ದೈವಸ್ಥಾನದ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ

0

ದ.ಕ. ಸಂಪಾಜೆ ಗ್ರಾಮದ ಬೈಲೆ – ಗೂನಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ವತಿಯಿಂದ ಆಟಿ ಸಂಭ್ರಮ – ಕೆಸರುಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಸಮಾರಂಭವು ಕಾಪಿಲಗದ್ದೆ ಇರ್ಣೆ ಗುತ್ತು ಕುಳವಾರು ಭೂಮಿ ಬೈಲೆ ಗೂನಡ್ಕದಲ್ಲಿ ಜು.28ರಂದು ನಡೆಯಿತು.

ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ. ಅವರು ಕೆಸರುಗದ್ದೆಗೆ ಹಾಲೆರೆದು, ದೈವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಗೌಡ ಕೆ.ಸಿ. ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ದೈವ ನರ್ತಕ ಕೇಪು ಅಜಿಲ ಅವರಿಗೆ ಸನ್ಮಾನಿಸಿ – ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ದಾಮೋದರ ಕೆ.ಸಿ. ಅವರು ಸನ್ಮಾನಪತ್ರ ವಾಚಿಸಿದರು.ಡಾ. ಡಿ.ವಿ. ಲೀಲಾಧರ್ ಅವರು ಕ್ರೀಡಾಕೂಟಕ್ಕೆ ಶುಭಹಾರೈಸಿದರು.ವೇದಿಕೆಯಲ್ಲಿ ಕೆಸರುಗದ್ದೆ ಕ್ರೀಡಾ ಕೂಟದ ಗೌರವಾಧ್ಯಕ್ಷ ಲೋಕಯ್ಯ ಗೌಡ ಮಂಗಳೂರು, ಆಡಳಿತ ಮೊಕ್ತಸರ ನಾರಾಯಣ ಗೌಡ ಕೆ.ಸಿ. ಆಡಳಿತ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಸರ್ವೀಸ್ ಕರ್ನಾಟಕ ಸೋನಿ ಕಂಪನಿ ಡ್ರೀಲರ್ ಸತೀಶ್ ಡಿ. ವಿ , ಹಿರಿಯ ನರ್ತಕ ಕೇಪು ಅಜಿಲ, ಪ್ರಧಾನ ಕಾರ್ಯದರ್ಶಿ ದಾಮೋದರ ಕೆ., ಸಿ., ಉಪಾಧ್ಯಕ್ಷರುಗಳಾದ ಜಗದೀಶ್ ಪಿ.ಎಲ್‌., ಜಯರಾಮ ಗೌಡ ಅಬೀರ, ಖಜಾಂಜಿ ಪ್ರಕಾಶ ಕೆ.ಪಿ., ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಧನಪಾಲ ಕೆ.ಆರ್., ಪ್ರಧಾನ ಕಾರ್ಯದರ್ಶಿ ಮನೋಜ್ ಜಿ.ಎಸ್., ಕೆಸರುಗದ್ದೆ ಕ್ರೀಡಾಸಮಿತಿಯ ಗೌರವ ಸಲಹೆಗಾರ ಜಗದೀಶ್ ಕೆ.ಪಿ., ಕಾರ್ಯಾಧ್ಯಕ್ಷ ಮನೀಷ್ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಹಂಸರಾಜ ಕುಯಿಂತೋಡು, ಕೋಶಾಧಿಕಾರಿ ರಂಜನ್ ಕಲ್ಲುಗದ್ದೆ ಕ್ರೀಡೋತ್ಸವ ಸಮಿತಿ ಸದಸ್ಯರುಗಳಾದ ನಾಗರಾಜ ಯು.ಎಸ್., ಗಣೇಶ್ ಕಾಪಿಲ, ವರದರಾಜ್ ಸಂಕೇಶ್, ವಿಜಯ ಆಚಾರ್ಯ ಪೆರಂಗೋಡಿ, ಮಹಿಳಾ ಸಮಿತಿ ಸಂಚಾಲಕಿ ಶ್ರೀಮತಿ ರಮ್ಯಾ ನಾಗೇಶ್, ಸರಕಾರಿ ಪ್ರಥಮ ದರ್ಜೆವಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಅರಂತೋಡು ಗ್ರಾಂ. ಪಂ. ಸದಸ್ಯ ದಯಾನಂದ ಕುರುಂಜಿ, ಮೋಹನ ಪಾರೆಮಜಲು ಉಪಸ್ಥಿತರಿದ್ದರು.

ಆಡಳಿತ ಸಮಿತಿಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರು ಸ್ವಾಗತಿಸಿ, ಮನೀಶ್ ಗೂನಡ್ಕ ವಂದಿಸಿದರು. ಶ್ರೀಮತಿ ಆರತಿ ಪುರುಷೋತ್ತಮ ಪ್ರಾರ್ಥಿಸಿ, ವಿ. ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸಹಕರಿಸಿದರು.