ಅಜ್ಜಾವರದಲ್ಲಿ ಆಟಿ ಉತ್ಸವ

0

ಚೈತ್ರ ಯುವತಿ ಮಂಡಲ ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ ಅಜ್ಜಾವರ ಇವುಗಳ ಜಂಟಿ ಆಶ್ರಯದಲ್ಲಿ ಪ್ರಥಮ ವರ್ಷದ ಆಟಿ ಉತ್ಸವ ಕಾರ್ಯಕ್ರಮ ಅಜ್ಜಾವರ ಹೈಸ್ಕೂಲ್ ಬಳಿಯ ಅಯ್ಯಪ್ಪ ಸಂಕೀರ್ಣ ಅಂಗಡಿ ಕಟ್ಟಡದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿಭಟ್ ವಹಿಸಿದರು.

ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲೀಲಾ ಮನಮೋಹನ ಮುಡೂರು ತೆಂಗಿನ ಹಿಂಗಾರವನ್ನು ಅರಳಿಸುವುದರ
ಮುಖಾoತರ ಉದ್ಘಾಟನೆಯನ್ನು ಮಾಡಿದರು.ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ದುಬೈಯಲ್ಲಿ ಉದ್ಯೋಗಿಯಾಗಿರುವ ಜಯರಾಮ, ಯುವತಿ ಮಂಡಲದ ಕಾರ್ಯದರ್ಶಿ ಶ್ರೀಮತಿ ಮಾಲತಿಸೂರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯಕ್ ಅಜ್ಜಾವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮನೆಯಲ್ಲಿ ತಯಾರಿಸಿ ತಂದ ಆಟಿ ಖಾದ್ಯಗಳು 36 ಬಗೆಯ ಪ್ರದರ್ಶಿಸಲಾಗಿತ್ತು.

ಈ ಸಂದರ್ಭದಲ್ಲಿ ಚೆನ್ನೆಮಣೆ ಮತ್ತು ಕಲ್ಲಾಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತ್ತು. ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 80 ಕ್ಕೂ ಮಿಕ್ಕಿ ಜನರು ಭಾಗವಸಿದ್ದರು..ಬಂದವರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಪ್ರಾರ್ಥನೆಯನ್ನು ಕುಮಾರಿ ಧರಿತ್ರಿ, ಭೂಮಿಕಾ, ಪ್ರಿಯದರ್ಶಿನಿ, ಸ್ವಾಗತವನ್ನು ಶ್ರೀಮತಿ ಗೀತಾoಜಲಿ ಗುರುರಾಜ್, ಧನ್ಯವಾದ ಕು. ಚರೀಷ್ಮಾ ಆಚಾರ್ಯ, ಕಾರ್ಯಕ್ರಮ ನಿರೂಪಣೆ ಕು. ಹರ್ಷಿತಾ. ಕೆ ಮಾಡಿದರು.