ಪಂಜದಲ್ಲಿ ಉಕ್ಕಿ ಹರಿದಿ ಹೊಳೆ : ಸೇತುವೆ ಮುಳುಗಡೆ

0

ಭಾರೀ ಮಳೆಯಿಂದಾಗಿ ಪಂಜ ಹೊಳೆ ನೀರಿನ ಹರಿವು ಏರಿಕೆಯಾಗಿದ್ದು ಪಂಜ ಸೇತುವೆ ಮುಳುಗಡೆ ಗೊಂಡು ಜು.30 ರಂದು ಸಂಜೆ ಪಂಜ – ಸುಬ್ರಹ್ಮಣ್ಯ ವಾಹನ ಸಂಚಾರ ಸ್ಥಗಿತ ಗೊಂಡಿದೆ.

ಮಧ್ಯಾಹ್ನ ಪಂಜ ಸಮೀಪದ ಬೊಳ್ಮಲೆಯಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನದಿಯ ನೆರೆ ನೀರು ಹರಿಯುತ್ತಿತ್ತು . ಸಂಜೆ ವೇಳೆಗೆ ನೀರಿನ ಮಟ್ಟ ಏರಿಕೆಯಾಗಿ ಪಂಜ ಸೇತುವೆ ಮುಳುಗಡೆ ಗೊಂಡಿದೆ.