ಸೀಮೆ ತೊಡಿಕಾನ ದೇವಸ್ಥಾನದ ವತಿಯಿಂದ ಆಡಳಿತ ಅಧಿಕಾರಿ ಹಾಗೂ ನಿವೃತ್ತ ಬಿ ಇ ಓ ರವರಿಗೆ ಸನ್ಮಾನ

0

ಸುಳ್ಯ ಸೀಮೆ ತೊಡಿಕಾನ ಶ್ರಿ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ನಿವೃತ್ತ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ ಇವರನ್ನು ವಯೋ ನಿವೃತ್ತಿ ಅಂಗವಾಗಿ ಆ.1 ರಂದು ದೇವಳದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ‌ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು,ದೇವಳದ ಕಛೇರಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ, ಅರ್ಚಕ ವರ್ಗ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.