ಮೊಗರ್ಪಣೆ :ವಯನಾಡ್ ದುರಂತದಲ್ಲಿ ಮೃತಪಟ್ಟವರಿಗೆ, ಕಷ್ಟದಲ್ಲಿ ಸಿಲುಕಿದವರಿಗೆ ವಿಶೇಷ ಪ್ರಾರ್ಥನೆ

0

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಸರ್ವರಿಗೂ ಹಾಗೂ ಭೂ ಕುಸಿತದಿಂದ ಕಷ್ಟದಲ್ಲಿ ಸಿಲುಕಿದ ಜನತೆಗಾಗಿ ಮೊಗರ್ಪಣೆ ಜುಮಾ ಮಸೀದಿಯಲ್ಲಿ ಅ. 1 ರಂದು ವಿಶೇಷ ಪ್ರಾರ್ಥನ ಮಜ್ಲಿಸ್ ನಡೆಯಿತು.

ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪ್ರಕೃತಿ ದುರಂತಗಳಿಂದ ನಮ್ಮ ನಾಡಿನ ಸಮಸ್ತ ಜನತೆಗೆ ರಕ್ಷಣೆ ಕೋರಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಯ್ಯಿದ್ ಮಾಂಬ್ಳಿ ತಂಗಳ್ ರವರ ದರ್ಗಾದಲ್ಲಿ ಯಾಸೀನ್ ಪಠಣ ನಡೆದು ಲೋಕ ಶಾಂತಿಗಾಗಿ ಸಾಮೂಹಿಕ ಪ್ರಾರ್ಥಿನೆ ನಡೆಸಿದರು.

ಈ ಸಂಧರ್ಭದಲ್ಲಿ ಮುಅಲ್ಲಿಮರಾದ ಮೂಸಾ ಮುಸ್ಲಿಯಾರ್, ದರ್ಸ್ ವಿದ್ಯಾರ್ಥಿಗಳು, ಸ್ಥಳೀಯ ಜಮಾತ್ ಸದಸ್ಯರು ಉಪಸ್ಥಿತರಿದ್ದರು.