ಸುಳ್ಯ ತಾಲೂಕು ಬಿಲ್ಲವ ಸಂಘದ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಎನ್.ಎಸ್.ಡಿ.ವಿಠಲದಾಸ್ ,ಅಧ್ಯಕ್ಷರಾಗಿ ಕೃಷ್ಣಕುಮಾರ್ ಅಲೆಕ್ಕಾಡಿ,ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಸಾರಕೆರೆ

ಸುಳ್ಯ ತಾಲೂಕು ಬಿಲ್ಲವ ಸಂಘದ ಮಹಾಸಭೆ ಆ.04 ರಂದು ಸುಳ್ಯದ ಶಿವಶಕ್ತಿ ಹೋಟೆಲ್ ನಲ್ಲಿ ಸಂಘದ ಅಧ್ಯಕ್ಷ ಎನ್ ಎಸ್ ಡಿ ವಿಠಲದಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ನವೀನ್ ಕುಮಾರ್ ಸಾರಕೆರೆ ವರದಿ ವಾಚಿಸಿದರು. ನಂತರ ಸಂಘಕ್ಕೆ ನೂತನ ಜಾಗ ಖರೀದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಲೆಕ್ಕ ಪತ್ರ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಉಬರಡ್ಕ ನಿವಾಸಿ ವಾರಿಜ ಅವರಿಗೆ ನಿರ್ಮಿಸಿ ಕೊಟ್ಟಿರುವ ಮನೆಯ ಕಾಂಕ್ರೀಟ್ ಕೆಲಸದ ಖರ್ಚು ವೆಚ್ಚದ ಬಗ್ಗೆ ಸಭೆಗೆ ತಿಳಿಸಿಕೊಡಲಾಯಿತು.
ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎನ್.ಎಸ್‍.ಡಿ ವಿಠಲದಾಸ್ ಬೆಳ್ಳಾರೆ,ನೂತನ ಅಧ್ಯಕ್ಷರಾಗಿ ಕೃಷ್ಣಕುಮಾರ್ ಅಲೆಕ್ಕಾಡಿ, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಸಾರಕೆರೆ, ಖಜಾಂಜಿಯಾಗಿ ಚಂದ್ರಶೇಖರ ಹೈದಂಗೂರು ಇವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಹರೀಶ್ ಕಾವಿನಮೂಲೆ, ಸುರೇಶ್ ಪೆರುವಾಜೆ, ರಜನೀಶ್ ಕೊಡಿಯಾಲ, ರವೀಂದ್ರ ತೊಡಿಕಾನ, ಅನಿಲ್ ಕುತ್ಯಾಡಿ, ಭರತ್ ಬೊಮ್ಮಾರು,ಲೋಹಿತ್ ರೆಂಜಾಳ,ಸುನಿಲ್ ಪಟ್ಟೆ,ಹರೀಶ್ ದೋಳ, ಕೃಷ್ಣಪ್ಪ ಪೂಜಾರಿ ಬೇಲ್ಯ, ಶಶಿಕಲಾ ಕೇನಡ್ಕ, ಶಿವಪ್ರಸಾದ್ ಕೆ.ವಿ ಸುಳ್ಯ, ಸುಂದರ ಪೂಜಾರಿ ಕಾನತ್ತಿಲ, ಸರೋಜಿನಿ ರಾಜೀವ ಸುಳ್ಯ, ಶೇಖರ್ ಪೂಜಾರಿ ಸುಳ್ಯ ಹಾಗೂ ರಮೇಶ್ ಪೂಜಾರಿ ಜಯನಗರ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ನವೀನ್ ಕುಮಾರ್ ಸಾರಕೆರೆ ಸ್ವಾಗತಿಸಿ, ಸುಳ್ಯ ಯುವವಾಹಿನಿ ಘಟಕದ ಸ್ಥಾಪಕಧ್ಯಕ್ಷ ಶಿವಪ್ರಸಾದ್ ಪೂಜಾರಿ ವಂದಿಸಿದರು.