ಶಿಕ್ಷಕಿ ಪೂರ್ಣಿಮಾ ಭೂತಕಲ್ಲು ರವರಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಭಿನಂದನೆ

0

ಕರ್ನಾಟಕ ಸರಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ 2023 -24ನೇ ಸಾಲಿನಲ್ಲಿ ಪುತ್ತೂರಿನ ಮೌಲಾನ ಆಜಾದ್ ಮಾದರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ ರಾಜ್ಯಕ್ಕೆ ಉತ್ತಮ ಗುಣಾತ್ಮಕ
ಶೇ.100% ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಶೇ.100 ಫಲಿತಾಂಶ ಲಭಿಸಲು ಕಾರಣ ಕರ್ತರಾದ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಬಿ.
ಎಸ್ ರವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಗುರುತಿಸಿ ಸಚಿವರಾದ ಜಮೀರ್ ಅಹಮದ್ ಖಾನ್ ರವರು ಜು. 29 ರಂದು ಬೆಂಗಳೂರಿನ ದೇವರಾಜ ಅರಸು ಭವನ ವಸಂತನಗರದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿದರು. ಇವರು ಎರ್ಕ ಪ್ರಸನ್ನ ವೈ.ಟಿ ಯವರ ಪತ್ನಿ.