ಆ.8 ರಂದು ಸುಬ್ರಹ್ಮಣ್ಯದಲ್ಲಿ ಪಶ್ಚಿಮ ಘಟ್ಟ ಸೂಕ್ಷ್ಮವಲಯ ಘೋಷಣೆ ಮತ್ತು ಕಸ್ತೂರಿ ರಂಗನ್ ವರದಿಯ ಅನುಷ್ಠಾನ ವಿರೋಧಿಸಿ ಹೋರಾಟ ನಡೆಸಲು ಸಭೆ

0

ಪಶ್ಚಿಮ ಘಟ್ಟ ಸೂಕ್ಷ್ಮವಲಯ ಘೋಷಣೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲು
ಆ.8 ರಂದು ಬೆಳಿಗ್ಗೆ 10:30ಕ್ಕೆ ಸುಬ್ರಹ್ಮಣ್ಯದ ಪಂಚಾಯತ್ ನ ಬಳಿ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಸಾರ್ವಜನಿಕರು, ರೈತರು, ಬದುಕಿನ ಉಳಿವಿಗಾಗಿ, ಪಕ್ಷ, ಜಾತಿ ಭೇದ ಮರೆತು ಭಾಗವಹಿಸುವಂತೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಕೇಳಿಕೊಂಡಿದ್ದಾರೆ.