ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಾ. ಕುರುಂಜಿ ವೆಂಕಟರಮಣ ಗೌಡರ 11ನೇ ಪುಣ್ಯಸ್ಮರಣೆ

0

ಸುಳ್ಯದ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎ.ಒ.ಎಲ್.ಇ ಸ್ಥಾಪಕಾಧ್ಯಕ್ಷ ಡಾ. ಕುರುಂಜಿ ವೆಂಕಟ್ರಮಣ ಗೌಡರ 11ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ ದೀಪ ಬೆಳಗಿಸಿದರು. ಸಂಸ್ಥೆಯ ಕಚೇರಿ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ ಡಾ. ಕುರುಂಜಿಯವರ ಕಾರ್ಯ ಸಾಧನೆ, ಶೈಕ್ಷಣಿಕ ಸೇವೆ ಮತ್ತು ಆದರ್ಶಗಳನ್ನು ತಿಳಿಸುತ್ತಾ ನಿತ್ಯ ನಿರಂತರ ಕೆವಿಜಿಯವರ ಸ್ಮರಣೆ ಮಾಡುತ್ತಿರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಎಲ್ಲಾ ಹಿರಿಯ, ಕಿರಿಯ ತರಬೇತಿ ಅಧಿಕಾರಿಗಳು ಸಂಸ್ಥೆಯ ಸಿಬ್ಬಂದಿಗಳು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.