ದುಗ್ಗಲಡ್ಕ: ಕಲ್ದಂಬೆ ನಾಗಬನ ದಲ್ಲಿ ನಾಗರಪಂಚಮಿ ಆಚರಣೆ

0

ದುಗ್ಗಲಡ್ಕದ ಕಲ್ದಂಬೆ ರಾಘವೇಂದ್ರ ಭಟ್ ರವರ ಮನೆಯ ನಾಗಬನ ದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಇಂದು ನಡೆಯಿತು. ರಾಘವೇಂದ್ರ ಭಟ್ ರವರ ಮಾರ್ಗದರ್ಶನದಲ್ಲಿ ಅವರ ಪುತ್ರ ಶ್ರೀಶ ಕಲ್ದಂಬೆ ನೇತೃತ್ವದಲ್ಲಿ ನಾಗನಿಗೆ ಹಾಲು, ಸಿಯಾಳ ಅಭಿಷೇಕ, ತಂಬಿಲ ಸೇವೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಲ್ಮಡ್ಕ, ಪ್ರಶಾಂತ್ ಕೊಳಂಜಿಕೋಡಿ, ರಂಜಿತ್ ಕಲ್ಮಡ್ಕ, ರಾಮಚಂದ್ರ ಕಲ್ಮಡ್ಕ ಉಪಸ್ಥಿತರಿದ್ದರು.