ದೇವಚಳ್ಳ : ಭಾರತೀಯ ಜನತಾ ಪಾರ್ಟಿಯ ಎಲಿಮಲೆ ಬೂತ್ ನ ಸಭೆ

0

ನೂತನ ಅಧ್ಯಕ್ಷ ಉದಯಕುಮಾರ್ ಚಳ್ಳ, ಕಾರ್ಯದರ್ಶಿ ರಾಧಾಕೃಷ್ಣ ಮಾವಿನಗೊಡ್ಲು

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ಎಲಿಮಲೆ ಬೂತ್ ನ ಸಭೆ ಆ.04 ರಂದು ನಡೆಯಿತು.

ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಶಕ್ತಿ ಕೇಂದ್ರದ ಸಹ ಪ್ರಮುಖ್ ಇಂದಿರೇಶ್ ಗುಡ್ಡೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಕೇರ, ಸವಿತಾ ಕಾಯರ, ಗ್ರಾ.ಪಂ.ಸದಸ್ಯೆ ಪ್ರೇಮಲತಾ ಕೇರ, ವಿಕ್ರಾಂತ್ ಚಳ್ಳ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೂತ್‌ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಮಾವಿನಗೊಡ್ಲು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಮಾವಿನಗೊಡ್ಡು, ಬಿ.ಎಲ್.2 ಆಗಿ ಗಣೇಶ್ ಕೇರ, ಮತಗಟ್ಟೆ ಏಜೆಂಟ್ ಆಗಿ ತಾರಾನಾಥ ಅಡಿಗೈ, ಸದಸ್ಯರಾಗಿ ಜೀವನ್ ಕಲ್ಲುಪಣೆ, ವಿನಯ್ ಕಲ್ಲುಪಣೆ, ಲೀಲಾವತಿ ಪಲ್ಲತ್ತಡ್ಕ, ಶೃಜೇಶ್ ಕಲ್ಲುಪಣೆ, ದಿನೇಶ್‌ ಮಾವಿನಗೊಡ್ಲು, ಜಯಂತ ತಳೂರು, ಪ್ರಶಾಂತ್ ಅಂಬೆಕಲ್ಲು, ಆನಂದ ಗೌಡ ಕರಂಗಿಲಡ್ಕ, ರವಿಪ್ರಕಾಶ್‌ ಹೊನ್ನೆಮೂಲೆ, ಯಕ್ಷಿತ್ ಚಳ್ಳ ಆಯ್ಕೆಯಾದರು.