ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಸಂಭ್ರಮದ ಆಟಿ ಉತ್ಸವ

0

ಮಕ್ಕಳಲ್ಲಿ ಸಾಂಪ್ರದಾಯಿಕ ಮನೋಭಾವನೆ ಬೆಳೆಸಬೇಕೆಂಬ ಆಶಯದಿಂದ ಸಂಸ್ಥೆಯಲ್ಲಿ ಪ್ರತಿ ವರ್ಷವೂ ಆಟಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯ ಆಟಿ ಉತ್ಸವ ಆ.‌ 10ಎಂದು ನಡೆಯಿತು. ಆಟಿ ಉತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಡ್ಡಾನ, ಹಾಡುಗಾರಿಕೆ, ನೃತ್ಯ ಮತ್ತು ಸಾಂಪ್ರದಾಯಿಕ ಎ.ಜೆ ಪಾಕಶಾಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಪ್ರದಾಯದಂತೆ ದೀಪ ಬೆಳಗಿಸುವ ಹಾಗೂ ತುಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ನೃತ್ಯ ಮತ್ತು ಹಾಡು ಸ್ಪರ್ಧೆಗಳಿಗೆ ಕೆವಿಜಿ ಐಪಿಎಸ್ ನ ಶಿಕ್ಷಕರಾದ ಶ್ರೀಮತಿ ನೀಲವೇಣಿ ಮತ್ತು ಶ್ರೀಮತಿ ಲಕ್ಷ್ಮಿ ಲಾವಣ್ಯ ತೀರ್ಪುಗಾರರಾಗಿ ಆಗಮಿಸಿದ್ದರು. ಎ.ಜೆ ಪಾಕಶಾಲೆಯ ತೀರ್ಪುಗಾರರಾಗಿ ಕೆವಿಜಿ ಅಮರಜ್ಯೋತಿಯ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಸೂರಯ್ಯ ಸುಂತೋಡು ಹಾಗೂ ಶ್ರೀಮತಿ ಸುಜಾತ ಹರೀಶ್ ಕಾಮತ್ ರವರು ಆಗಮಿಸಿದ್ದರು. ವಿದ್ಯಾರ್ಥಿನಿ ರಿತಿ ಆಳ್ವ ಸ್ವಾಗತಿಸಿದರೆ ಸೃಷ್ಟಿ ವಂದಿಸಿದರು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟ್ ಡಾ. ರೇಣುಕಾ ಪ್ರಸಾದ್ ಮತ್ತು ಟ್ರಸ್ಟಿ ಜ್ಯೋತಿ ಆರ್ ಪ್ರಸಾದ್ ಕಾಲೇಜಿನ ಸಿಇಓ ಡಾ. ಉಜ್ವಲ್ ಯುಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಹಾಗೂ ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.