ಸುಳ್ಯ ಅನ್ಸಾರ್ ನಲ್ಲಿ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮ ಹಾಗೂ ತಹಲೀಲ್

0

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗಾಂಧಿನಗರ, ಸುಳ್ಯ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ದ.ಕ ಜಿಲ್ಲಾ ಮತ್ತು ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯದ್ ಪಝಲ್ ಕೊಯಮ್ಮ ತಂಙಳ್ ಕೂರ ರವರ ಅನುಸ್ಮರಣೆ ಕಾರ್ಯಕ್ರಮ ಆ 12 ರಂದು ಮಗ್ರಿಬ್ ನಮಾಜ್ ಬಳಿಕ ಸುಳ್ಯ ಗಾಂಧಿನಗರದಲ್ಲಿರುವ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ಸಾರ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ ವಹಿಸಿದರು

ಸಯ್ಯದ್ ಕುಂಞಕೋಯ ತಂಙಳ್ ಸಅದಿ ದುವಾಶಿರ್ವಚನ ಮಾಡಿದರು.

ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ವಯನಾಡ್ ಅನು ಸ್ಮರಣ ಕಾರ್ಯಕ್ರಮ ಉದ್ಘಾಟಿಸಿದರು

ಅನುಸ್ಮರಣಾ ಪ್ರಭಾಷಣವನ್ನು ಪ್ರಖ್ಯಾತ ಧಾರ್ಮಿಕ ಪಂಡಿತ ಜಾಮಿಯಾ ಸಹದಿಯ ಅರೇಬಿಕ್ ಕಾಲೇಜು ಪ್ರಾಂಶುಪಾಲರಾದ ಹುಸೈನ್ ಸಅದಿ ಕೆ.ಸಿ ರೋಡ್ ರವರು ಮಾಡಿದರು.

ಗಾಂಧಿನಗರ ಜುಮ್ಮಾ ಮಸೀದಿ ಮುದರ್ರಿಸ್ ಇರ್ಫಾನ್‌ ಸಖಾಫಿ, ಅನ್ಸಾರಿಯಾ ದಹವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕ್ಕ‌ರ್ ಹಿಮಮಿ ಸಖಾಫಿ, ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಸಿಎಂಎಸ್, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್‌ ಜನತಾ,ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್, ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಜಯನಗರ,ಅನ್ಸಾರ್ ಸಲಹಾ ಸಮಿತಿ ಸದಸ್ಯರಾದ ಹಾಜಿ ಕೆಬಿ ಮಹಮ್ಮದ್, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್‌ ಶುಕೂರ್,ಗಾಂಧಿನಗರ ಜಮಾಯತ್ ಕಮಿಟಿ ಮಾಜಿ ಅಧ್ಯಕ್ಷರಾದ ಮುಸ್ತಫಾ ಕೆ.ಎಂ,ಆದಂ ಹಾಜಿ ಕಮ್ಮಾಡಿ,ನಗರ ಪಂಚಾಯತ್ ಸದಸ್ಯರಾದ ಸಿದ್ದೀಕ್ ಕೊಕ್ಕೊ,ಉಮ್ಮರ್ ಕೆ ಎಸ್, ಸೇರಿದಂತೆ ಅನ್ಸಾರ್ ಪದಾಧಿಕಾರಿಗಳು ನಿರ್ದೇಶಕರು ಉಪಸ್ಥಿತರಿದ್ದರು.