ಆ.14: ಪಂಜದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ

0

ಹಿಂದು ಜಾಗರಣ ವೇದಿಕೆ ಪಂಜ, ಸುಳ್ಯ ತಾಲೂಕು,ಪುತ್ತೂರು ಜಿಲ್ಲೆ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ಪಂಜದಲ್ಲಿ ಆ.14ರಂದು ಸಂಜೆ 6 ಗಂಟೆಯಿಂಧ ನಡೆಯಲಿದೆ.

ಪಂಜ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದ ಬಳಿಯಿಂದ ಹೊರಡಲಿರುವ ಬೃಹತ್ ಪಂಜಿನ ಮೆರವಣಿಗೆಯು ಸಿ ಎ ಬ್ಯಾಂಕ್ ನ ತನಕ ನಡೆಯಲಿದೆ.

ಕಾರ್ಯಕ್ರಮದಲ್ಲಿ ನೆರಿಮೊಗರು ಸರಸ್ವತಿ ವಿದ್ಯಾಮಂದಿರದ ಸ್ಥಾಪಕಾಧ್ಯಕ್ಷ ಅವಿನಾಶ್ ಕೊಡಂಕಿರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

.