ಸುಳ್ಯ ವಕೀಲರ ಸಂಘದ ಪದಗ್ರಹಣ ಸಮಾರಂಭ

0

ಸುಳ್ಯ ವಕೀಲರ ಸಂಘದ ನೂತನ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ತಂಡದ ಪದಪ್ರದಾನ ಸಮಾರಂಭ ಆ.೧೩ರಂದು ಸುಳ್ಯದ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಧೀಶರಾದ ಬಿ.ಮೋಹನ್ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಧೀಶರಾದ ಕು.ಅರ್ಪಿತಾ ವೇದಿಕೆಯಲ್ಲಿದ್ದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸುಕುಮಾರ್ ಕೋಡ್ತುಗುಳಿಯವರಿಗೆ, ನಿರ್ಗಮನ ಅಧ್ಯಕ್ಷ ನಾರಾಯಣ ಕೆ.ಯವರು ಅಧಿಕಾರ ಹಸ್ತಾಂತರ ಮಾಡಿದರು. ಕರ್ನಾಟಕ ಜ್ಯುಡಿಶಿಯಲ್ ಅಕಾಡೆಮಿ ಬೆಂಗಳೂರು ಇದರ ತರಬೇತುದಾರರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಧೀಶರಾದ ಚಂದ್ರಶೇಖರ ಯು. ಸಹಾಯಕ ಸರಕಾರಿ ಅಭಿಯೋಜಕರಾದ ರಮೇಶ್ ಬಿ., ರೋನ್ ಡಿ’ಸೋಜಾ ಮುಖ್ಯ ಅತಿಥಿಗಳಾಗಿದ್ದರು.


ಸಮಾರಂಭದಲ್ಲಿ ವಕೀಲರ ಸಂಘದ ಹಾಗೂ ಸುಳ್ಯ ನ್ಯಾಯಾಲಯದ ವತಿಯಿಂದ ನಿವೃತ್ತ ಜಿಲ್ಲಾ ನ್ಯಾಯಧೀಶರಾದ ಚಂದ್ರಶೇಖರ ಯು.ರನ್ನು ಸನ್ಮಾನಿಸಲಾಯಿತು.


ವಕೀಲರ ಸಂಘದ ಕೋಶಾಧಿಕಾರಿ ಹರ್ಷಿತ್ ಕಾರ್ಜ, ಜತೆ ಕಾರ್ಯದರ್ಶಿ ಅನಿತಾ ನಾಯಕ್, ಸಾಂಸ್ಕೃತಿಕ ಕಾರ್ಯದರ್ಶಿ ಸುಮಾ ಕೆ.ಎಸ್., ಕ್ರೀಡಾ ಕಾರ್ಯದರ್ಶಿ ಕುಸುಮಾಧರ ಕೆ.ಎಸ್., ಗ್ರಂಥಾಲಯ ಕಾರ್ಯದರ್ಶಿ ಅಶ್ವಿನ್ ಕುಮಾರ್ ವೇದಿಕೆಯಲ್ಲಿದ್ದರು.

ಉಪಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಅತಿಥಿಗಳನ್ನು ಪರಿಚಯಿಸಿದರು.


ನಿರ್ಗಮನ ಕಾರ್ಯದರ್ಶಿ ವಿನಯ ಮುಳುಗಾಡು ಸ್ವಾಗತಿಸಿದರು. ನೂತನ ಉಪಾಧ್ಯಕ್ಷ ನೂತನ ಕಾರ್ಯದರ್ಶಿ ಜಗದೀಶ್ ಡಿ.ಪಿ. ವಂದಿಸಿದರು. ವಕೀಲರುಗಳಾದ ದಳ ಸುಬ್ರಾಯ ಭಟ್ ಹಾಗೂ ಶ್ರೀಮತಿ ಚಂಪಾ ವಿ. ಗೌಡ ಕಾರ್ಯಕ್ರಮ ನಿರೂಪಿಸಿದರು.