ಮುರುಳ್ಯ ಹಾಲು ಉತ್ಪಾದಕರ ಸಂಘಕ್ಕೆ 12 ಮಂದಿ ಅವಿರೋಧ ಆಯ್ಕೆ

0

ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘ ಅಲೆಕ್ಕಾಡಿ ಇದರ ಆಡಳಿತ ಮಂಡಳಿ ನಿರ್ದೇಶಕರುಗಳಾಗಿ 12 ಮಂದಿ ಅವಿರೋಧವಾಗಿ ಆಯ್ಕೆಯಾದರು.


ನಾಮ ಪತ್ರ ಹಿಂತೆಗೆದುಕೊಳ್ಳಲು ಇಂದು ಕಡೆಯ ದಿನವಾಗಿದ್ದು, ಜನಾರ್ದನ ಅಲೆಕ್ಕಾಡಿ ಮತ್ತು ಸೂರಪ್ಪ ಗೌಡ ಮುರುಳ್ಯ ರವರು ನಾಮಪತ್ರ ಹಿಂತೆಗೆದು ಕೊಂಡಿದುದರಿಂದ ಉಳಿದ 12 ಮಂದಿ ಅವಿರೋಧ ಆಯ್ಕೆಯಾದರು.


ನಾಮಪತ್ರ ಸಲ್ಲಿಸಿದ ಭವ್ಯ, ಹರೀಶ್ ರೈ ಟಪ್ಪಲುಕಟ್ಟೆ, ಸುಂದರ ಗೌಡ ಆರೆಂಬಿ, ಜಗನ್ನಾಥ ರೈ ಕೆ,ಗೀತಾ ಕಳತ್ತಾಜೆ,ಸೀತಾರಾಮ ಗೌಡ ನಾಗನಕಜೆ, ಪ್ರಭಾಕರ ರೈ ಮರುವಂಜ, ಲೀಲಾವತಿ ಪಿ.ಆರ್.,ಸಾವಿತ್ರಿ ಪಿ.ಪೂದೆ, ಸುಂದರಿ ಅಲೆಕ್ಕಾಡಿ, ಎನ್, ರಾಮಚಂದ್ರ ನೂಜಾಡಿ, ಅಶೋಕ್ ಕುಮಾರ್ ಊರ್ಸಾಗು ಅವಿರೋಧವಾಗಿ ಆಯ್ಕೆಯಾದರು.