ಛಾಯಗ್ರಾಹಕರಿಂದ ದೇಣಿಗೆ ಹಸ್ತಾಂತರ

0

ವಿಶ್ವ ಛಾಯಗ್ರಾಹಕರ ದಿನಾಚರಣೆ ಅಂಗವಾಗಿ ವಲಯದ ವತಿಯಿಂದ ವಿಶೇಷ ಕಾರ್ಯಕ್ರಮವಾಗಿ ಕ್ಯಾನ್ಸರ್ ಪೀಡಿತಳಾಗಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ರವರಿಗೆ ರೂ.10000/- ವನ್ನು ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ದಿವಾಕರ ಮುಂಡಾಜೆ, ಶಶಿ ಗೌಡ, ದಯಾನಂದ ಅಡ್ಕಾರ್, ಪರಮ್, ಹರೀಶ್ ರಾವ್, ವಸಂತಿ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.