ಸೃಷ್ಠಿ ಫ್ಯಾನ್ಸಿ & ಮೊಬೈಲ್ ಮಳಿಗೆ ಸ್ವಾತಂತ್ರ್ಯೊತ್ಸವದ ಅದೃಷ್ಟ ಡ್ರಾ ಫಲಿತಾಂಶ

0

ಪ್ರತಿಯೊಂದು ಹಬ್ಬ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ಮತ್ತು ವಿಶೇಷ ರಿಯಾಯಿತಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಸಂಸ್ಥೆ ಸೃಷ್ಠಿ ಮೊಬೈಲ್ ಶೋರೂಂ ಮಳಿಗೆಯಲ್ಲಿ ಈ ಬಾರಿ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಅದೃಷ್ಟ ಕೂಪನ್ ನೀಡಲಾಗಿದ್ದು, ಅದೃಷ್ಟವಂತರ ಆಯ್ಕೆ ಮತ್ತು ನಿವೃತ್ತ ಯೋಧರಿಗೆ ಅಭಿನಂದನಾ ಕಾರ್ಯಕ್ರಮ ಆ. 26ರಂದು ಸಂಜೆ ಮಳಿಗೆಯಲ್ಲಿ ನಡೆಯಿತು.

ನಿವೃತ್ತ ಯೋಧರಾದ ಜಯಕರ ಮಡ್ತಿಲ, ಬಾಲಕೃಷ್ಣ ಚೊಕ್ಕಾಡಿ, ಹೇಮಚಂದ್ರ ಪೇರಾಲು, ಮೋನಪ್ಪ ಜಟ್ಟಿಪಳ್ಳ ರವರು ಅದೃಷ್ಟವಂತರನ್ನು ಆಯ್ಕೆ ಮಾಡಿದರು.

ಇದೇ ಸಂದರ್ಭ ನಿವೃತ್ತ ಯೋಧರನ್ನು ಸಂಸ್ಥೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಶ್ರೇಯಸ್ ಕಾಂಪ್ಲೆಕ್ಸ್ ಮಾಲಕ ಸುಧಾಕರ ಕಾಮತ್, ಡಾ.ವಿದ್ಯಾ ಶಾಂಭವ ಪಾರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕ್ಯಾಟ್ ವಾಕ್ ಅಶೋಕ ಸರಳಾಯ, ಮಹದೇವ್ ಫ್ಲವರ್ ನ ಮಾಧವ ಮಂಗಲ್ಪಾಡಿ, ಬಿಗ್ ಬೈಟ್ ನ ಸುಜನ್ ಕುಂಟುಕಾಡು, ಅಯ್ಯಂಗಾರ್ ಬೇಕರಿಯ ಲಕ್ಷ್ಮೀಶ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಶೈಲೇoದ್ರ ಸರಳಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ನಿವೃತ್ತ ಯೋಧರ ಪರಿಚಯ ವಾಚಿಸಿದರು.

ಸುದ್ದಿ ವರದಿಗಾರ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.