ದ.ಕ.ತಮಿಳು ಸೇವಾ ಸಂಘ ಹಾಗೂ ಸುಳ್ಯ ರೆಪ್ಕೋ ಬ್ಯಾಂಕ್ ಡೆಲಿಗೇಟ್ ಆಶ್ರಯದಲ್ಲಿ ಪ್ರತಿಭಾನ್ವಿತ ತಮಿಳು ವಿದ್ಯಾರ್ಥಿಗಳಿಗೆ ಸನ್ಮಾನ

0

ಸುಳ್ಯದ ಸದರ್ನ್ ರೆಸಿಡೆನ್ಸಿ ಹೊಟೇಲ್ ನಲ್ಲಿ ದಕ್ಷಿಣ ಕನ್ನಡ ತಮಿಳು ಸೇವಾ ಸಂಘ ಸುಳ್ಯ ಹಾಗು ರೆಪ್ಕೊ ಬ್ಯಾಂಕ್ ಡೆಲಿಗೇಟ್ ಇವರುಗಳ ಆಶ್ರಯದಲ್ಲಿ ಎಸ್.ಎಸ್.ಎಲ್. ಸಿ ಮತ್ತು ಪಿ. ಯು. ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ತಮಿಳು ವಿದ್ಯಾರ್ಥಿಗಳಿಗೆ ಹಾಗು ರಾಷ್ಟ್ರ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಸುಮಾರು 115 ಮಂದಿಯನ್ನು ಆ.18 ರಂದು ಸನ್ಮಾನಿಸಲಾಯಿತು.


ಉದ್ಘಾಟಕರಾಗಿ ಕಾಸರಗೋಡು ಜಿಲ್ಲಾಧಿಕಾರಿ ಇನ್ಬ ಶೇಖರ್. ಕೆ ಐಎಎಸ್ ಇವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರತ್ ಕುಮಾರ್ ನಾಗಪಟ್ಟಣ ಅಧ್ಯಕ್ಷರು ದ.ಕ.ತಮಿಳು ಸೇವಾ ಸಂಘ ಇವರು ವಹಿಸಿಕೊಂಡರು.


ಅತಿಥಿಗಳಾಗಿ ಮಂಗಳೂರು ತಮಿಳು ಸಂಘ ಮೈಸೂರು ತಮಿಳು ಸಂಘ ಹಾಗು ಸಿದ್ದಾಪುರ ತಮಿಳು ಸಂಘದ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಹಾಗೂ ಸುಧಾಕರ್ ಭಾರತೀಯ ಸೇನೆ ಮತ್ತು ಸತೀಶ್ ಬೆಂಗಳೂರು ಯೋಗೀಶ್ವರನ್ ಮಂಗಳೂರು ಹಾಗೂ ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ತಮಿಳು ಸಂಘದ ಸ್ಥಾಪಕ ಅಧ್ಯಕ್ಷರಾದ ಪೆರುಮಾಳ್ ಹಾಗು ವಿಜಯರಾಜ್ ಮಂಗಳೂರು ಉಪಸ್ಥಿಯಲ್ಲಿ ಈ ಕಾರ್ಯಕ್ರಮ ನಡೆಯಿತು.. ಕಾರ್ಯಕ್ರಮದಲ್ಲಿ ತಾಯ್ನಾಡಿಗೆ ಮರಳಿದ ತಮಿಳಿಗರ ಹಾಗು ತಮಿಳು ಸೇವಾ ಸಂಘ ದ ಬಗೆಗಿನ ಕಿರುಚಿತ್ರ ಎಲ್ಲರ ಗಮನ ಸೆಳೆಯಿತು.
ದ.ಕ.ತಮಿಳು ಸೇವಾ ಸಂಘದ ಸ್ಥಾಪಕಾಧ್ಯಕ್ಷ ಪೆರುಮಾಳ್ ಸ್ವಾಗತಿಸಿ,ಅಸ್ತವಿಕ ಮತ್ತು ಭಾರತಿ ಕಾರ್ಯಕ್ರಮ ನಿರೂಪಿಸಿ,ಆನಂದರಾಜ್ ವಂದಿಸಿದರು.