ಪೈಚಾರ್ ಜಂಕ್ಷನ್ ಗೆ ಬೀದಿದೀಪ ಅಳವಡಿಸಲು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಗೆ ಮನವಿ

0

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ಪೈಚಾರಿನಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಮಾಡುವಾಗ ರಸ್ತೆ ಬದಿಯಲ್ಲಿ ಇರುವ ವಿದ್ಯುತ್ ಕಂಬಗಳನ್ನು ತೆಗೆದು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು.
ಇದೀಗ ವಿದ್ಯುತ್ ಕೆಲಸ ಮುಗಿದು ತಿಂಗಳಾದರು ಬೀದಿದೀಪ (ಸ್ಟೀಟ್ ಲೈಟ್ )ಅಳವಡಿಕೆ ಮಾಡದೆ ಪೈಚಾರ್ ಪೇಟೆ ಕತ್ತಲಲ್ಲಿ ಮುಳುಗಿದೆ.

ಸುಳ್ಯ ನಗರಕ್ಕೆ ಆಗಮನ ವಾಗುವ ಪ್ರದೇಶ ಕತ್ತಲೆಯಲ್ಲಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ನಮ್ಮ ಮನವಿಯನ್ನು ಪರಿಗಣಿಸಿ ಕೂಡಲೇ ಬೀದಿ ದೀಪಗಳನ್ನು ಅಳವಡಿಸಿಕೊಡಬೇಕೆಂದು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆ 27 ರಂದು ಜಾಲ್ಸೂರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದಾರೆ.

ಈ ಸಂಧರ್ಭ ಅಧ್ಯಕ್ಷರಾದ ರೀಫಾಯಿ ಎಸ್.ಎ, ಸಂಘಟನೆಯ ಸದಸ್ಯರಾದ ನಝೀರ್ ಶಾಂತಿನಗರ, ಬಶೀರ್ ಆರ್.ಬಿ, ನಾಸಿರ್ ಕೆ.ಪಿ ಹಾಗೂ ಲತೀಫ್ ಟಿ.ಎ ಉಪಸ್ಥಿತಿರಿದ್ದರು.