ಅರಂತೋಡು : ಕೊಡಂಕೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ

0

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಕೊಡಂಕೇರಿ ಅರಂತೋಡುನಲ್ಲಿ ಆ. ೨೫ರಂದು ಪ್ರಥಮ ವರ್ಷದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಉದ್ಘಾಟನೆ ಸಮಾರಂಭದಲ್ಲಿ ಅರಂತೋಡು ಗ್ರಾಮ ಪಂಚಾಯತ್‌ನ ಅದ್ಯಕ್ಷರಾದ ಕೇಶವ ಅಡ್ತಲೆ ಅಧ್ಯಕತೆ ವಹಿಸಿದ್ದರು. ಕಾರ್ಯಕ್ರಮವನ್ನು ಶಶಿಕುಮಾರ್ ಪಂಡಿತ್ ಉದ್ಘಾಟಿಸಿದರು.


ಈ ಕಾರ್ಯಕ್ರಮದಲ್ಲಿ ಅರಂತೋಡು ದುರ್ಗಾಮಾತಾ ಭಜನಾ ಮಂದಿರದ ಅದ್ಯಕ್ಷರಾದ ಪದ್ಮನಾಭ ಕುರುಂಜಿ , ಹಾಗೂ ಸಮಿತಿಯ ಅದ್ಯಕ್ಷರಾದ ಪುಷ್ಪಾಧರ ಕೊಡಂಕೇರಿ, ಉಪಸ್ಥಿತರಿದ್ದರು.


ಉದ್ಘಾಟನಾ ಸಮಾರಂಭದ ನಂತರ ಮಕ್ಕಳಿಗೆ ,ಸಾರ್ವಜನಿಕರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಆಕರ್ಷಣೆಯಾಗಿ ಪುಟಾಣಿಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆ , ಪುರುಷರ ಅಡ್ಡ ಎಣ್ಣೆಕಂಬ , ಪ್ರಥಮವಾಗಿ ಮಹಿಳೆಯರಿಗೂ ಅಡ್ಡ ಎಣ್ಣೆ ಕಂಬ ಸ್ಪರ್ಧೆ ನಡೆಸಲಾಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.


ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸವನ್ನು ಪದ್ಮಕುಮಾರ್ ಗುಂಡಡ್ಕ ಮಾಡಿದರು.
ಈ ಸಮಾರೋಪ ಸಮಾರಂಭದಲ್ಲಿ ಸೋಮಶೇಖರ ಪೈಕ ಅಧ್ಯಕ್ಷರು ವಿ.ಹಿ.ಪ.ಸುಳ್ಯ ಪ್ರಖಂಡ, ಸಮಿತಿಯ ಉಪಾಧ್ಯಕ್ಷರಾದ ಬೆಳ್ಯಪ್ಪ ನೀರಬಿದಿರೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪವನ್ ಕುಮಾರ್ ಕೊಡಂಕೇರಿ ಕಾರ್ಯಕ್ರಮ ನಿರೂಪಿಸಿದರು. ಭಾನುಪ್ರಕಾಶ್ ಸ್ವಾಗತಿಸಿ ,ಲೋಕೇಶ್ ರವರು ವಂದಿಸಿದರು.