ಐವರ್ನಾಡು: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಭಾರತೀಯ ಜನತಾ ಪಾರ್ಟಿಯ ಮುಂದಿನ ಆರು ವರ್ಷಗಳ ಅವಧಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆ.2ರಂದು ದೆಹಲಿಯಲ್ಲಿ ಚಾಲನೆ ನೀಡಿದ್ದು ಐವರ್ನಾಡು ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ನಂದಕುಮಾರ್ ಬಾರೇತಡ್ಕ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಹಾಶಕ್ತಿಕೇಂದ್ರದ ಸದಸ್ಯರಾದ ಕಿಶನ್ ಜಬಳೆ, ವಿನಯ ಕೊಡ್ತಿಲು ( ದೇರಾಜೆ ಬೂತ್ ಅಧ್ಯಕ್ಷರು ) ರಕ್ಷಿತ್ ಸಾರಕೂಟೆಲು ( ಬೂತ್ ಕಾರ್ಯದರ್ಶಿ ) ದೇವಿ ಪ್ರಸಾದ್ ಕೊಪ್ಪತಡ್ಕ, ನಿಶ್ಚಿತ್ ಗುತ್ತಿಗಾರು ಮೂಲೆ, ಪುನೀತ್ ಚಾಕೋಟೆ, ಅನಿಲ್ ದೇರಾಜೆ,ನವೀನ್ ಚಾತುಬಾಯಿ,ರಂಜಿತ್ ಮೂಲೆತೋಟ, ಲವಕುಮಾರ್ ಬಾರೆತಡ್ಕ,ಅರುಣ್ ಗುತ್ತಿಗಾರುಮೂಲೆ,ಅಜಿತ್ ಗುತ್ತಿಗಾರುಮೂಲೆ, ಸತ್ಯನಾರಾಯಣ ಅಚ್ರಪ್ಪಾಡಿ, ಯವರು ಉಪಸ್ಥಿತರಿದ್ದರು.