ಸುಳ್ಯದ ರಂಗಮಯೂರಿ ಕಲಾಶಾಲೆಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಭೇಟಿ – ಗೌರವಾರ್ಪಣೆ

0

ಸುಳ್ಯ ರಂಗಮಯೂರಿ ಕಲಾಶಾಲೆಗೆ ಕರ್ನಾಟಕ ಸರ್ಕಾರದ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗಮಿಸಿ, ಗೌರವಾರ್ಪಣೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯ ಜೊತೆಗೆ, ಕಲೆ ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶದ ಜೊತೆಗೆ, ಬೆಂಬಲ ನೀಡುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಈ ವೇಳೆ ರಂಗಮಯೂರಿ ಕಲಾಶಾಲೆ ನಿರ್ದೇಶಕ ಲೋಕೇಶ್ ಊರುಬೈಲು, ಸುದ್ದಿ ವಾಹಿನಿಯ ಮುಖ್ಯಸ್ಥ ಡಾ. ಯು.ಪಿ ಶಿವಾನಂದ್, ಹರೀಶ್ ಬಂಟ್ವಾಳ್ , ದುರ್ಗಾಕುಮಾರ್ ನಾಯರ್ ಕೆರೆ, ಶಿವಪ್ರಸಾದ್ ಆಲೆಟ್ಟಿ, ಯಶ್ವಿತ್ ಕಾಳಮ್ಮನೆ, ಶರೀಪ್ ಜಟ್ಟಿಪಳ್ಳ, ಹಿರಿಯರಾದ ಪೂವಪ್ಪ ಕಣಿಯೂರು, ಕಲಾವಿದ ಶಶಿಕಾಂತ್ ಮಿತ್ತೂರು ಉಪಸ್ಥಿತರಿದ್ದರು.