ಅನಾರೋಗ್ಯ ಪೀಡಿತ ಬಾಲಕನಿಗೆ ಚಿಕಿತ್ಸೆಗೆ ಧನ ಸಂಗ್ರಹಣೆಗೆ ನೆರವಾದ ಸುಳ್ಯ ಆಂಬುಲೆನ್ಸ್ ಚಾಲಕ ಅಭಿಲಾಷ್

0

ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗೆ ಧನ ಸಹಾಯ ಸಂಗ್ರಹಣೆಗೆ ಸುಳ್ಯದ ಆಂಬುಲೆನ್ಸ್ ಚಾಲಕ ಅಭಿಲಾಷ್ ರವರು ಸಹಕಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ತಮಿಳು ಸೇವಾ ಸಂಘ (ರಿ.) ಹಾಗೂ ಉದವುಮ್ ಕರಂಗಲ್ ಸಂಘದ ವತಿಯಿಂದ ಕಲ್ಲುಗುಂಡಿ ದರ್ಸ್ಕಾಸ್ತು ನಿವಾಸಿ ಹಿತೇಶ್ ಎಂಬ ಬಾಲಕನಿಗೆ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಲಾಗಿತ್ತು.

ಈ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ ಅಭಿಲಾಷ್ ಸಮಾಜಸೇವಕ ಜಾಬಿರ್ ನಿಜಾಮಿ ಅವರ ಬಳಿ ಈ ವಿಷಯವನ್ನು ತಿಳಿಸಿ ಅವರ ಮೂಲಕ ಮಗುವಿನ ಚಿಕಿತ್ಸೆಗೆ ರೂ 1,50,000/ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ಅವರ ಮನೆಯವರ ಬಳಿ ಹಣವನ್ನು ನೀಡುವಲ್ಲಿ ಮಾನವೀಯತೆ ಮೆರೆದಿದ್ದಾರೆ.ಅಭಿಲಾಷ್ ಸುಳ್ಯ (ಮುತ್ತಪ್ಪನ್ ಆಂಬುಲೆನ್ಸ್ ಇದರ ಚಾಲಕರಾಗಿದ್ದು ಇವರ ಸೇವೆಗೆ ಮಗುವಿನ ಕುಟುಂಬಸ್ಥರು ಮತ್ತು ಸಂಘಟನೆಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನೂರಾರು ಮಂದಿ ಧಾನಿಗಳು ಸಹಕರಿಸಿದ್ದಾರೆ. ಜಾಬಿರ್ ಸೇವಾ ದಿ ಡ್ರೀಮ್ಸ್ ಹಾಗು ಶ್ರೀ ರಾಮಕೃಷ್ಣ (ತೇಜು) ಅವರೂ ಕೂಡ ಶ್ರಮಿಸಿದ್ದಾರೆ.