ಕುಕ್ಕುಜಡ್ಕದಲ್ಲಿ 32 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ-ಭಜನೆ

0

ಮಕ್ಕಳಿಗೆ ಮಾತೃ , ಪಿತೃ ವಂದನಾ ವಿಶೇಷ ಕಾರ್ಯಕ್ರಮ

ಅಮರಮುಡ್ನೂರಿನ ಕುಕ್ಕುಜಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 32 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ರಾಧಾಕೃಷ್ಣ ಭಟ್ ಜೋಗಿಯಡ್ಕ ರವರ ನೇತೃತ್ವದಲ್ಲಿ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸೆ.7 ಮತ್ತು 8 ರಂದು ಜರುಗಲಿದ್ದು ಆರಂಭದ ದಿನದಂದು ಗಣೇಶನ ಮೂರ್ತಿ ಪ್ರತಿಷ್ಠೆಯಾಗಿ ಗಣಪತಿ ಹವನ ನೆರವೇರಿತು.

ಬೆಳಗ್ಗೆ ಪುರೋಹಿತ ರವರ ನೇತೃತ್ವದಲ್ಲಿ ಗಣಪತಿ ದೇವರ ವಿಗ್ರಹ ಪ್ರತಿಷ್ಠೆಯಾಗಿ ಗಣಪತಿ ಹವನ ಹಾಗೂ ಮಹಮಂಗಳಾರತಿಯು ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಸಮರ್ಪಣಾ ಭಜನಾ ಸಂಘ ಕುಕ್ಕು ಜಡ್ಕ, ಧರ್ಮಶಾಸ್ತ್ರ ಭಜನಾ ಮಂದಿರ ಪಿಲಿಕಜೆ ಭಜನಾ ಕಾರ್ಯಕ್ರಮ ನಡೆಯಿತು.
ವಿಶೇಷವಾಗಿ ಮಕ್ಕಳಿಗೆ ತಾಯಿ ತಂದೆಯವರ ಪಾದಪೂಜೆ ಮಾಡುವ ವಿಶೇಷ ಮಾತೃ ಪಿತೃ ವಂದನಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ, ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ ನಡೆಯಿತು.
ಸಮಿತಿ ಅಧ್ಯಕ್ಷ ಪುಂಡರೀಕ ಚಿಲ್ಪಾರು ಬಹುಮಾನ ವಿತರಿಸಿದರು. ಗೌರವಾಧ್ಯಕ್ಷ ಗಣೇಶ ಪಿಲಿಕಜೆ, ಪದ್ಮನಾಭ ಬೊಳ್ಳೂರು,ಕಾರ್ಯದರ್ಶಿ ಜನಾರ್ದನ ಪೈಲೂರು, ಚಿದಾನಂದ ಬಾಂಜಿಕೋಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳಿ‌ ನಳಿಯಾರು ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.