ಸುಳ್ಯ: ಬಿದ್ದು ಸಿಕ್ಕಿದ ಹಣ ಹಿಂತಿರುಗಿಸಿ ಪ್ರಾಮಾಣಿಕತೆ

0

ಸುಳ್ಯದ ಕಾಂತಮಂಗಲ ಬಳಿ ಬಿದ್ದು ಸಿಕ್ಕದ ರೂ 10 ಸಾವಿರವನ್ನು ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮುಳ್ಯ ನಿವಾಸಿಗಳಾದ ಮೇಘ ಮತ್ತು ಪ್ರಿಯಾ ಎಂಬರು ಬರುವಾಗ ಕಾಂತಮಂಗಲ ಸರ್ಕಲ್ ಬಳಿ ಹಣದ ಕಟ್ಟು ಬಿದ್ದು ಸಿಕ್ಕಿದ್ದು ಅದನ್ನು ಸಮೀಪದ ಪೂಜಾ ಸ್ಟೋರ್ ನಲ್ಲಿ ನೀಡಿದರು. ಬಳಿಕ ಹಣ ಕಳೆದುಕೊಂಡಿದ್ದ ವೈಶಾಖ್ ರು ಅಂಗಡಿಯವರಿಂದ ಹಣ ಪಡೆದುಕೊಂಡರು.