ಕಲ್ಲುಗುಂಡಿ ಗಣೇಶೋತ್ಸವ- ರಂಗಮಯೂರಿ ಕಲಾ ಶಾಲೆಯ ಸಾಂಸ್ಕೃತಿಕ ವೈಭವ

0

ಕಲ್ಲುಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 36 ನೇ ವರ್ಷದ ಕಾರ್ಯಕ್ರಮದಲ್ಲಿ ಸುಳ್ಯದ ರಂಗಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಗಾನ ವೈಭವ ಕಾರ್ಯಕ್ರಮವು ಸೆ.7 ರಂದು ನಡೆಯಿತು.

ರಂಗಮಯೂರಿ ಕಲಾಶಾಲೆಯ ವಿದ್ಯಾರ್ಥಿಗಳಿಂದ ನಡೆದ ಗಾನ, ನೃತ್ಯ ವೈಭವದಲ್ಲಿ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಳಿಸಿತು. ವೆಸ್ಟರ್ನ್ ಡ್ಯಾನ್ಸ್, ಫಿಲ್ಮ್ , ಸೆಮಿ ಕ್ಲಾಸಿಕಲ್ ನೃತ್ಯದ ಜೊತೆಗೆ, ಗಾನ ವೈಭವ ಕಾರ್ಯಕ್ರಮ ವೈವಿಧ್ಯಮಯವಾಗಿ ಮೂಡಿಬಂತು.

ಕಾರ್ಯಕ್ರಮದಲ್ಲಿ ರಂಗಮಯೂರಿ ಕಲಾಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ಶಿವಪ್ರಸಾದ್ ಆಲೆಟ್ಟಿ, ಸುನಂದಾ ಶೆಟ್ಟಿ, ಸೌಮ್ಯ ಆಲಂಕಲ್ಯ, ಹವ್ಯಶ್ರೀ ಕಲ್ಲಾಜೆ ಸಹಕರಿಸಿದರು.
ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಲಾವಿದ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.