ಬೆಳ್ಳಾರೆ ಜೇಸಿ ಸಪ್ತಾಹ ಉದ್ಘಾಟನೆ

0

ಬೆಳ್ಳಾರೆ ಜೇಸಿಐ ಘಟಕದ 2024ನೇ ಸಾಲಿನ ಜೇಸಿ ಸಪ್ತಾಹ ಉದ್ಘಾಟನೆ ಮತ್ತು ಸುಳ್ಯ ಉಪ ಅಂಚೆ ವಿಭಾಗದ ಸಹಯೋಗದಲ್ಲಿ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಣೆ ಹಾಗೂ ಸಮೂಹ ಅಪಘಾತ ವಿಮೆ ಅಭಿಯಾನ ಪೆರುವಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ವಲಯ ಉಪಾಧ್ಯಕ್ಷ ಜೇಸಿಐ ಸೆನೆಟರ್ ಅಭಿಷೇಕ್ ಜಿ. ಎಂ ಕಾರ್ಯಕ್ರಮ ಉದ್ಘಾಟಿಸಿದರು.

ಸುಳ್ಯ ಅಂಚೆ ಕಚೇರಿ ಮೇಲ್ವಿಚಾರಕ ಜಯಪ್ರಕಾಶ್ ಸಮೂಹ ಅಪಘಾತ ವಿಮೆ ಅಭಿಯಾನ ಬಗ್ಗೆ ಮಾಹಿತಿ ನೀಡಿದರು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ ಅಭಿವೃದ್ಧಿ ಅಧಿಕಾರಿ ಪೂಜಿತ್ ಸಾಲ್ಯಾನ್, ಪೆರುವಾಜೆ ಜಲದುರ್ಗ ಲಯನ್ಸ್ ಕ್ಲಬ್ ಅಧ್ಯಕ್ಷೆ ಉಷಾದೇವಿ ರಾವ್, ಬೆಳ್ಳಾರೆ ಉಪ ಅಂಚೆ ಕಛೇರಿಯ ಉದ್ಯೋಗಿ ಅನಂತಕೃಷ್ಣ ಪ್ರಭು ಉಪಸ್ಥಿತರಿದ್ದರು. ಜಗದೀಶ್ ಪಿ ಎಲ್ ಜೇಸಿವಾಣಿ ವಾಚಿಸಿದರು. ಪೂರ್ವಧ್ಯಕ್ಷ ಪ್ರಸಾದ್ ಸೇವಿತ ಸಹಕರಿಸಿದರು. ಕಾರ್ಯದರ್ಶಿ ವಾಸುದೇವ ಪೆರುವಾಜೆ ವಂದಿಸಿದರು.

ಕಾರ್ಯಕ್ರಮದಲ್ಲಿ ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ, ಸ್ಥಾಪಕ ಸದಸ್ಯ ನಾರಾಯಣ ಭಟ್ ಅವರನ್ನು ಗೌರವಿಸಲಾಯಿತು.
ವರದಿ : ಉಮೇಶ್ ಮಣಿಕ್ಕಾರ