ಸುದ್ದಿ ಬಿಡುಗಡೆ ಮತ್ತು ಷರಾ ಪ್ರಕಾಶನದ ಆಶ್ರಯದಲ್ಲಿ ದೇಶ ಭಕ್ತಿ ‌ಗಾಯನ ಸ್ಪರ್ಧೆ

0

ದ್ವಿತೀಯ ಸ್ಥಾನ ಪಡೆದ ಎಲಿಮಲೆ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸುದ್ದಿ ಸಮೂಹ ಸಂಸ್ಥೆ ಸುಳ್ಯ‌ ಮತ್ತು ಷರಾ ಪ್ರಕಾಶನ‌ ಸುಳ್ಯ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ “ದೇಶ ಭಕ್ತಿ ಗೀತೆ ಗಾಯನ” ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಎಲಿಮಲೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೆ. 11 ರಂದು ನಡೆಯಿತು. ‌

ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಯಶ್ವಿತ್ ಕಾಳoಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ದೇವಚಳ್ಳ ಗ್ರಾ. ಪಂ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸುದ್ದಿ ವರದಿಗಾರ ಶಿವರಾಮ ಕಜೆಮೂಲೆ, ಶ್ರೀಜಿತ್ ಸಂಪಾಜೆ
,ವಿದ್ಯಾರ್ಥಿಗಳು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶಾಲಾ ಸಹ ಶಿಕ್ಷಕ ಮುರಳೀಧರ ಸ್ವಾಗತಿಸಿ, ವಂದಿಸಿದರು.