ಬೆಳೆ ಗಾರರಿಗೆ ಕರಿಮೆಣಸು ಬಗ್ಗೆ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಕ್ರಮ

0

ಸಂಬಾರ ಮಂಡಳಿ ಮಡಿಕೇರಿ, ತೋಟಗಾರಿಕೆ ಇಲಾಖೆ ಸುಳ್ಯ ಮತ್ತು ಸುಳ್ಯ ರೈತ ಉತ್ಪಾದಕ ಕಂಪನಿ ನಿಯಮಿತ ಇವರುಗಳ ಸಹಯೋಗದಲ್ಲಿ ರೈತರಿಗೆ ಬೆಳೆ ಗಾರರಿಗೆ ಕರಿಮೆಣಸು ಬಗ್ಗೆ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಕ್ರಮ ಎ ಪಿ ಎಂ ಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಸುಬ್ರಾಯ ಭಟ್ ಪಿಲಿಕಜೆ ಇವರ ತೋಟ ವೀಕ್ಷಣೆ ಮಾಡಿ ನಂತರ ಎ ಪಿ ಎಂ ಸಿ ಸಭಾಭವನದಲ್ಲಿ ಅಂಕೆ ಗೌಡ ರವರು ಸಮಗ್ರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ
ಸುಳ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷರಾದ ವೀರಪ್ಪಗೌಡ ಕೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ಸುಹಾನ ಪಿ ಕೆ, ಸಂಬಾರ ಮಂಡಳಿ ಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರೇಶ್ಮಿ, ರೈತ ಉತ್ಪಾದಕ ಕಂಪನಿ ನಿರ್ದೇಶಕರು ಮತ್ತು 70ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.