ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

0

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆಶ್ರಯದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಹಿಂದ್ ಲ್ಯಾಬ್ಸ್ ವತಿಯಿಂದ ಆರೋಗ್ಯ ತಪಾಸಣೆ ಎಡಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೆ. 12ರಂದು ನಡೆಯಿತು.


ಎಡಮಂಗಲ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಲೋಲಾಕ್ಷಿ, ಹಿಂದ್ ಲ್ಯಾಬ್ ವೈದ್ಯ ಡಾ. ಹೇಮಂತ್, ಸಂಯೋಜಕರಾದ ಅಕ್ಷತಾ ಗಣೇಶ್ ಕುಂಟೂರು, ವೀಕ್ಷಿತಾ, ಗಣ್ಯಶ್ರೀ, ದೀಪ್ತಿ ಮತ್ತು ಯಶೋಧ ಆರೋಗ್ಯ ತಪಾಸಣೆ ನಡೆಸಿದರು.